ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಯೋಗೀಶ್ .ವಿ ಶೆಟ್ಟಿ ಎರಡನೇ ಬಾರಿ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಯೋಗೀಶ್ .ವಿ ಶೆಟ್ಟಿ ಎರಡನೇ ಬಾರಿ ಆಯ್ಕೆ

Share This

ಉಡುಪಿ : 2016ರಿಂದ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಯೋಗೀಶ್. ವಿ ಶೆಟ್ಟಿ ಅವರು ಜಿಲ್ಲಾಧ್ಯಕ್ಷರನ್ನಾಗಿ 2ನೇ ಬಾರಿ ಪುನರಾಯ್ಕೆಯಾಗಿದ್ದಾರೆ.



ಮಾಜಿ ಪ್ರಧಾನಮಂತ್ರಿ ಗೌರವಾನ್ವಿತ ಎಚ್.ಡಿ ದೇವೇಗೌಡ,ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ, ಆತ್ಮೀಯತೆ ಮತ್ತು ವಿಶ್ವಾಸದ ನಾಯಕನಾಗಿ ಹೊರಹೊಮ್ಮಿದ, ಅವರ ಶಿಫಾರಸು ಮತ್ತು ರಾಜ್ಯಾಧ್ಯಕ್ಷರಾದ ಹೆಚ್ ಕೆ ಕುಮಾರಸ್ವಾಮಿ, ವೀಕ್ಷಕರ ಕಮಿಟಿಯ ಮುಖ್ಯ ಸಂಚಾಲಕರು ಮತ್ತು ಕಮಿಟಿ ಸದಸ್ಯರ ಶಿಫಾರಸ್ಸಿನ ಮೇರೆಗೆ ಕಳೆದ 27 ವರ್ಷದಿಂದ ಜನತಾ ಪರಿವಾರದಲ್ಲಿ ಗುರುತಿಸಿಕೊಂಡು, 2016ರಿಂದ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಯೋಗೀಶ ವಿ ಶೆಟ್ಟಿ ಯವರನ್ನು ಉಡುಪಿ ಜಿಲ್ಲಾಧ್ಯಕ್ಷರನ್ನಾಗಿ 2ನೇ ಬಾರಿ  ಪುನರಾಯ್ಕೆ ಮಾಡಿರುತ್ತಾರೆ ಎಂದು ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿರುತ್ತಾರೆ.


ಯೋಗೀಶ್ ವಿ ಶೆಟ್ಟಿ ಅವರು ಮುಂಬೈಯ ನಾಲಸಾಪುರದ ಹೋಟೆಲ್ ಉದ್ಯಮಿಗಳಾದ ರಮೇಶ್ ವಿ ಶೆಟ್ಟಿ ಕಾಪು ಮತ್ತು ಮೋಹನ್ ವಿ ಶೆಟ್ಟಿ ಕಾಪು ಅವರ ಸಹೋದರ.

Pages