ಬೆಂಗಳೂರು : HDFC ಬ್ಯಾಂಕ್ ತಮಿಳುನಾಡು ವಿಭಾಗದ ನೇಮಕಾತಿಗೆ ದಿನಪತ್ರಿಕೆಯಲ್ಲಿ ನೀಡಿರುವ ಜಾಹೀರಾತು ಭಾರಿ ವಿವಾದವನ್ನು ಉಂಟು ಮಾಡಿದ್ದು ಕಡೆಗೆ ಬ್ಯಾಂಕ್ ತಪ್ಪೊಪ್ಪಿಕೊಂಡು ಸೃಷ್ಟೀಕರಣ ನೀಡುದರೊಂದಿಗೆ ವಿವಾದ ತಣ್ಣಗಾಗಿದೆ.
![](https://blogger.googleusercontent.com/img/b/R29vZ2xl/AVvXsEjRy-NeMjHc5S2w5XnY1sMcn68P-GiEcXmtgu2_Cpx443r0c9YK25cNM4KVMyHmErWMnXNgcopB0J7R-teSJwgM9zMp_rZLICmp9oKMDj976YJYD0PhouE8wah_D-7Xhyphenhyphendc8ebbYdVXjfph/s16000/hdfc+bank.jpg)
ಬ್ಯಾಂಕ್ ನೇಮಕಾತಿಗೆ
ಸಂಬಂಧಿಸಿದಂತೆ ಪತ್ರಿಕೆಯಲ್ಲಿ ನೀಡಿರುವ ಜಾಹೀರಾತಿನಲ್ಲಿ 2021ರಲ್ಲಿ ಪಾಸಾದ ವಿದ್ಯಾರ್ಥಿಗಳು ಸಂದರ್ಶನಕ್ಕೆ
ಅರ್ಹರಲ್ಲ ಎಂಬ ಮಾಹಿತಿ ಪ್ರಕಟಿಸಿತ್ತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಜಾಹೀರಾತು ವೈರಲ್ ಆಗಿದ್ದು
ಬಹಳಷ್ಟು ಟೀಕೆಗೆ ಒಳಗಾಗಿತ್ತು.
ನಂತರ ಎಚ್ಚೆತ್ತ
ಬ್ಯಾಂಕ್ ಜಾಹೀರಾತು ಟೈಪಿಂಗ್’ನಲ್ಲಿನ ತಪ್ಪಿನಿಂದ ‘ಅರ್ಹರಲ್ಲ’ ಪದ ಬಳಕೆಯಾಗಿದ್ದು 2021ರಲ್ಲಿ ಪಾಸಾದವರು
ಕೂಡ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಸೃಷ್ಟೀಕರಣ ನೀಡಿದೆ.