ಬಂಟ ಸಮಾಜದ ದೈವ ಪಾತ್ರಿಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ ಸಮಾಜದ ದೈವ ಪಾತ್ರಿಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯಧನ

Share This
ಬಂಟ್ಸ್ ನ್ಯೂಸ್, ಮಂಗಳೂರು: ಕೊರೋನಾ ಮಹಾಮಾರಿಯ ಸಂಕಷ್ಟ ಸಮಯದಲ್ಲಿ ದೈವಾರಾಧನೆಯನ್ನೇ ನಂಬಿ ಜೀವನ ನಡೆಸುತ್ತಿರುವ ಬಂಟ ಸಮಾಜದ ದೈವ ಪಾತ್ರಿ / ಮುಕ್ಕಾಲ್ದಿಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಹಾಯಧನ ನೀಡಿದ್ದು ಈ ಮೂಲಕ ಮುಂದಿನ ಸಂಭಾವ್ಯ ಆತಂಕದ ದಿನಗಳನ್ನು ಕಳೆಯಲು ನಮಗೆ ಆನೆಬಲ ದೊರಕಿದಂತಾಗಿದೆ ಎಂದು ಬಂಟ ಸಮುದಾಯದ ರಾಜನ್ ದೈವಗಳ ದರ್ಶನ ಪಾತ್ರಿ / ಮುಕ್ಕಾಲ್ದಿಗಳು ಹೇಳಿದ್ದಾರೆ.
Kachor shekar Shetty
aikala harish shetty
ಲಾಕ್’ಡೌನ್ ಕಷ್ಟಕ್ಕೆ ಮನವಿ ಸಲ್ಲಿಸಿದಾಗ ತುರ್ತಾಗಿ ವಿಶೇಷ ಮುತುವರ್ಜಿ ವಹಿಸಿ ಕಾರ್ಯನಿರತರಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಐಕಳ ಹರೀಶ್ ಶೆಟ್ಟಿಯವರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಬಂಟರ ಕುಲದೈವ ಶ್ರೀ ಕಾಂತೇರಿ ಧೂಮಾವತಿ, ಶ್ರೀ ಕೊಡಮಣಿತ್ತಾಯ ಸಮಸ್ತ ಸರ್ವ ಧರ್ಮದೈವಗಳ ಪೂರ್ಣಾನುಗ್ರಹ ನಿಮಗಿರಲೆಂದು ಧರ್ಮದೈವಗಳಲ್ಲಿ ಪ್ರಾರ್ಥಿಸುವುದಾಗಿ ಬಂಟ ಸಮುದಾಯದ ರಾಜನ್ ದೈವಗಳ ದರ್ಶನ ಪಾತ್ರಿ / ಮುಕ್ಕಾಲ್ದಿಗಳು ಕತೃಜ್ಞತಾಪೂರ್ವಕವಾಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ. (ಸುದ್ದಿ ಕೃಪೆ: ಅಭಿಲಾಷ್ ಚೌಟ)

Pages