ಕೂಡು ಕುಟುಂಬದ ಕಲ್ಪನೆ ನಗರದಲ್ಲಿ ಸಾಕಾರ: ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ
ಮಂಗಳೂರು: ಮನುಷ್ಯ ಸಂಬಂಧಗಳು ತೀರಾ
ವ್ಯಾವಹಾರಿಕ ವಾಗುತ್ತಿರುವ ಈಗಿನ ಸಂಕೀರ್ಣ ಬದುಕಿನಲ್ಲಿ
ನಾವು ಒಬ್ಬರನ್ನೊಬ್ಬರು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಒಂದೊಂದು ಕುಟುಂಬವೂ ಒಂದೊಂದು
ದ್ವೀಪದಂತೆ ಬದುಕುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ
ಕೂಡು ಕುಟುಂಬದ ಕಲ್ಪನೆಯನ್ನು ನಗರದಲ್ಲಿ
ಸಾಕಾರಗೊಳಿಸುವಲ್ಲಿ ಜಯನಗರದ ನಿವಾಸಿಗಳು ಗೆಲುವು
ಸಾಧಿಸಿದ್ದಾರೆ ಎಂದು ಕರ್ನಾಟಕ ಜಾನಪದ,
ಯಕ್ಷಗಾನ ಮತ್ತು ತುಳು ಸಾಹಿತ್ಯ
ಅಕಾಡೆಮಿ ಮಾಜಿ ಸದಸ್ಯ ಹಾಗೂ
ಜಾನಪದ ಚಿಂತಕ ಪ್ರೊ.ಭಾಸ್ಕರ
ರೈ ಕುಕ್ಕುವಳ್ಳಿ ಹೇಳಿದ್ದಾರೆ.
ನಗರದ ಮರೋಳಿ ಜಯನಗರ ನಿವಾಸಿಗಳ
ಕ್ಷೇಮಾಭಿವೃದ್ಧಿ ಸಂಘದ 22ನೇ ವಾರ್ಷಿಕೋತ್ಸವ
ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಹಬಾಳ್ವೆಯ ಪಾಠ ನಮ್ಮ ಮನೆಯ
ವಠಾರ ದಿಂದಲೇ ಆಗಬೇಕು. ಆಧುನಿಕತೆಯ
ಸೋಗಿನಲ್ಲಿ ತಮ್ಮ ಮೂಲ ಸಂಸ್ಕೃತಿಗೆ
ಬೆನ್ನುಹಾಕಿ ವಿದೇಶೀ ಮಾದರಿಯನ್ನು ಅನುಸರಿಸುವ
ಯುವಜನಾಂಗಕ್ಕೆ ನಿಜವಾದ ಜೀವನಧರ್ಮದ ಅರಿವಾಗುವುದು
ನೆರೆಹೊರೆಯವರೊಂದಿಗೆ ಬೆರೆತು ಸಂಭ್ರಮಿಸಿದಾಗ ಮಾತ್ರ
ಎಂದವರು ನುಡಿದರು. ಇದೇ ಸಂದರ್ಭದಲ್ಲಿ ಸಮಾರಂಭವನ್ನು
ದೀಪ ಬೆಳಗಿಸಿ ಅವರು ಉದ್ಘಾಟಿಸಿದರು.
ಮಂಗಳೂರು
ಮಹಾನಗರ ಪಾಲಿಕೆ ಸದಸ್ಯ ಕೇಶವ
ಎಂ. ಜಯನಗರ ಮುಖ್ಯ ಅತಿಥಿಗಳಾಗಿದ್ದರು.
ಅವರು ಮಾತನಾಡಿ 'ಬಡಾವಣೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಮೊದಲ
ಆದ್ಯತೆಯಲ್ಲಿ ಒದಗಿಸಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ
ಎರಡನೇ ಬಾರಿಗೆ ಸ್ಥಳೀಯ ಕಾರ್ಪೋರೇಟರ್
ಆಗಿ ಆಯ್ಕೆಯಾದ ಅವರನ್ನು ಸಂಘದ ವತಿಯಿಂದ
ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ಏರ್ಪಡಿಸಿದ್ದ
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು
ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ವಿಶ್ರಾಂತ
ಬ್ಯಾಂಕ್ ಅಧಿಕಾರಿ ಎನ್.ಟಿ.
ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜಯರಾಮ ಗೌಡ ಗುಡ್ಡೆಮನೆ
ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಮಧುರ ಎಸ್. ಶೆಟ್ಟಿ
ವಂದಿಸಿದರು. ಸಂಘದ ಗೌರವಾಧ್ಯಕ್ಷೆ
ಶಶಿ ಜಯಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಸೀತಾರಾಮ
ಅಗಳಿ, ಜೊತೆ ಕಾರ್ಯದರ್ಶಿ ಎ.ಜೆ. ಆಳ್ವ ಉಪಸ್ಥಿತರಿದ್ದರು.
ಸಮಾರಂಭದ ಬಳಿಕ ಸಂಘದ ಸದಸ್ಯರಿಂದ
ವಿವಿಧ ವಿನೋದಾವಳಿಗಳು ಜರುಗಿದವು.