BUNTS NEWS, ಮುಂಬಯಿ: ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧಿವೇಶನವು ಆ. 31ರಂದು ಕುರ್ಲಾ
ಬಂಟರ ಸಂಘದ ಶ್ರೀಮತಿ ರಾಧಾಬಾಯಿ
ಟಿ. ಭಂಡಾರಿ ಸಭಾಗೃಹದಲ್ಲಿ ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ
ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ
ಜರಗಿತು.
ಈ ಸಮಾರಂಭದಲ್ಲಿ ಕರ್ನಾಟಕದ ಸಂಸದ ಬಿಜೆಪಿಯ ನೂತನ
ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲು,
ಕರ್ನಾಟಕದ ನೂತನ ಸಚಿವ ಕೋಟ
ಶ್ರೀನಿವಾಸ ಪೂಜಾರಿ ಮತ್ತು ವಸಾಯಿ-ವಿರಾರ್ ಮಹಾನಗರ ಪಾಲಿಕೆಯ
ನೂತನ ಮೇಯರ್ ಪ್ರವೀಣ್ ಸಿ.
ಶೆಟ್ಟಿ ಅವರನ್ನು ಸ್ಥಳೀಯ ಸಂಸದರಾದ ಗೋಪಾಲ್
ಸಿ ಶೆಟ್ಟಿ, ಬಂಟರ ಸಂಘ
ಮುಂಬಯಿಯ ಅಧ್ಯಕ್ಷರಾದ ಪದ್ಮನಾಭ ಎಸ್. ಪಯ್ಯಡೆ
ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ
ಸನ್ಮಾನಿಸಲಾಯಿತು.
ಸಮಾರಂಭದ
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ
ಐಕಳ ಹರೀಶ್ ಶೆಟ್ಟಿಯವರು ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಸಾಧನೆಯ
ಬಗ್ಗೆ ಮಾಹಿತಿಯಿತ್ತು ಎಲ್ಲಾ ಸನ್ಮಾನಿತರನ್ನು ಹಾಗೂ
ಸಮಾರಂಭದಲ್ಲಿ ಉಪಸ್ಥಿತರಿದ್ದ ವಿವಿಧ ಸಮುದಾಯದ ಗಣ್ಯರನ್ನು
ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಆನಂದ
ಎಂ ಶೆಟ್ಟಿ, ಕೆ ಪ್ರಕಾಶ್
ಶೆಟ್ಟಿ, ಉಮಾಕೃಷ್ಣ ಶೆಟ್ಟಿ ಮೊದಲಾದವರು ಮಾತನಾಡಿದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ,
ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ,
ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ
ಶೆಟ್ಟಿ ಮುಂಡ್ಕೂರು, ಮೈಸೂರು ಬಂಟರ ಸಂಘದ
ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ
ಜಯರಾಮ ಶೆಟ್ಟಿ, ಉಳ್ಳಾಲ ಬಂಟರ
ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬೈಂದೂರು
ಬಂಟರ ಸಂಘದ ಅಧ್ಯಕ್ಷ ಜಗನ್ನಾಥ
ಶೆಟ್ಟಿ, ದಾವಣಗೆರೆ ಬಂಟರ ಸಂಘದ ಅಧ್ಯಕ್ಷ
ಕರುಣಾಕರ ಶೆಟ್ಟಿ, ಬದ್ರಾವತಿ ಬಂಟರ
ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ,
ಎಕ್ಕಾರು ಬಂಟರ ಸಂಘದ ಅಧ್ಯಕ್ಷ
ರತ್ನಾಕರ ಶೆಟ್ಟಿ, ಡಾ. ಪಿ.
ವಿ. ಶೆಟ್ಟಿ, ಉಪೇಂದ್ರ ಶೆಟ್ಟಿ
ಬೆಂಗಳೂರು, ಪ್ರಥ್ವಿರಾಜ್ ಶೆಟ್ಟಿ, ಜೆ
ಪಿ ಶೆಟ್ಟಿ, ಸುಧಾಕರ ಶೆಟ್ಟಿ
ಬೆಹರಿನ್, ಸುಧಾಕರ ಹೆಗ್ಡೆ, ರಘುರಾಮ
ಶೆಟ್ಟಿ ಅವೆನ್ಯೂ, ಚಂದ್ರಹಾಸ ಕೆ. ಶೆಟ್ಟಿ, ಸಿಎ
ಸಂಜೀವ ಶೆಟ್ಟಿ, ಪ್ರವೀಣ್ ಬಿ
ಶೆಟ್ಟಿ, ಮಹೇಶ್ ಎಸ್ ಶೆಟ್ಟಿ,
ಗುಣಪಾಲ ಶೆಟ್ಟಿ ಐಕಳ, ಶರತ್
ವಿ ಶೆಟ್ಟಿ, ಶಶಿಧರ ಶೆಟ್ಟಿ,
ಹರೀಶ್ ಶೆಟ್ಟಿ ಗುರ್ಮೆ, ಪಾಂಡು
ಎಲ್ ಶೆಟ್ಟಿ, ರತ್ನಾಕ ಶೆಟ್ಟಿ
ಮುಂಡ್ಕೂರು, ರತ್ನಾ ಪಿ ಶೆಟ್ಟಿ,
ಶಾಂತಾರಾಮ ಶೆಟ್ಟಿ, ಅಶೋಕ್ ಶೆಟ್ಟಿ,
ಡಾ. ವಿರಾರ್ ಶಂಕರ ಶೆಟ್ಟಿ,
ಶಿವರಾಮ ಶೆಟ್ಟಿ ಸೂರತ್, ಸಂತೋಷ್
ಕುಮಾರ್ ಹೆಗ್ಡೆ, ಜಗನ್ನಾಥ ಶೆಟ್ಟಿ,
ನಗರ ಸೇವಕ ಅರವಿಂದ ಶೆಟ್ಟಿ,
ಕರುಣಾಕರ ಶೆಟ್ಟಿ ಡೊಂಬಿವಲಿ, ರಿತೇಶ್
ಶೆಟ್ಟಿ ಅಹ್ಮದಾಬಾದ್, ಸುರೇಶ್ ಶೆಟ್ಟಿ, ಭಾಸ್ಕರ
ಶೆಟ್ಟಿ, ಮನೋಹರ್ ಶೆಟ್ಟಿ, ಕೆ.
ಸಿ. ರೈ, ಆನಂದ ಶೆಟ್ಟಿ
ಗೊಯೆಂಕಾ, ದಿನಕರ ಶೆಟ್ಟಿ ರಮಡಾ,
ಸುನಿಲ್ ಶೆಟ್ಟಿ ಕುಂದಾಪುರ, ಸಂಜೀವ
ಎನ್ ಶೆಟ್ಟಿ, ರಘುನಾಥ
ಶೆಟ್ಟಿ ಅಂಕಲೇಶ್ವರ್, ರತ್ನಾಕರ ಶೆಟ್ಟಿ, ವಿಶ್ವಾನಾಥ
ಶೆಟ್ಟಿ, ಜಗನ್ನಾಥ ರೈ ಮೊದಲಾದವರು
ಉಪಸ್ಥಿತರಿದ್ದರು.
ನಗರದ ವಿವಿಧ ಜಾತೀಯ ಹಾಗೂ
ಇತರ ಪ್ರಮುಖ ಸಂಘಟನೆಗಳ ಪ್ರಮುಖರು
ಈ ಸಮಾರಂಭಕ್ಕೆ ಆಗಮಿಸಿದ್ದು
ಅವರನ್ನೂ ಗೌರವಿಸಲಾಯಿತು. ಬಂಟರ ಸಂಘದ ಪ್ರಾದೇಶಿಕ ಸಮಿತಿಯ
ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮವು ನಡೆಯಿತು. ಶೈಲಜಾ ಶೆಟ್ಟಿ ಪ್ರಾರ್ಥನೆಗೈದರು.
ಕರ್ನೂರು ಮೋಹನ್ ರೈ ಮತ್ತು ಅಶೋಕ ಪಕ್ಕಳ
ಕಾರ್ಯಕ್ರಮವನ್ನು ನಿರ್ವಹಿಸಿದರು. ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ
ಉಳ್ತೂರು ವಂದಿಸಿದರು. ವರದಿ: ಈಶ್ವರ ಎಂ. ಐಲ್
ಚಿತ್ರ:
ದಿನೇಶ್ ಕುಲಾಲ್