BUNTS NEWS, ಮಂಗಳೂರು: ಮಂಗಳೂರು ತಾಲೂಕು ಕಚೇರಿಯಲ್ಲಿ
ಉಪತಹಶೀಲ್ದಾರರಾಗಿ ನಿವೃತ್ತಿ ಹೊಂದಿದ ಬಿ. ಪುಷ್ಪರಾಜ
ಶೆಟ್ಟಿಯವರನ್ನು ಕರ್ನಾಟಕ ರಾಜ್ಯ ಸರಕಾರಿ
ನೌಕರರ ಸಂಘದ ಸಭಾ ಭವನದಲ್ಲಿ
ಗೌರವಿಸಲಾಯಿತು. ಅಪರ ಜಿಲ್ಲಾಧಿಕಾರಿ ಕುಮಾರ್
ಅವರು ಪೇಟ ತೊಡಿಸಿ ಶಾಲು
ಹಾರ ಹಾಕಿ ಚಿನ್ನದ ಉಂಗುರವನ್ನು
ತೊಡಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಸಹಾಯಕ ಆಯುಕ್ತರಾದ ಸಂತೋಷ್
ಕುಮಾರ್, ತಹಶೀಲ್ದಾರರಾದ ಟಿ.ಜಿ. ಗುರುಪ್ರಸಾದ್
ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.