BUNTS NEWS, ಒಮನ್: ಕೊಡಗಿನ ಮಕ್ಕಂದೂರು ಹೆಮ್ಮತ್ತಾಳು
ಎಂಬಲ್ಲಿ ಪ್ರಾಕೃತಿಕ ವಿಕೋಪ ಭೂಕುಸಿತದಲ್ಲಿ ಸಂತ್ರಸ್ಥರಾಗಿರುವ
ಬಂಟ ಕುಟುಂಬಕ್ಕೆ ಬಂಟ್ಸ್ ಒಮನ್ ರೂ.1 ಲಕ್ಷ ಸಹಾಯ ಧನ ನೀಡಿದೆ.
ಪ್ರಾಕೃತಿಕ ವಿಕೋಪ ಭೂಕುಸಿತದಲ್ಲಿ ಚಂದ್ರಾವತಿ
ರೈ, ಪುತ್ರ ಉಮೇಶ್ ರೈರವರು
ಮನೆ ಆಸ್ತಿ ಸಮೇತ ಕೊಚ್ಚಿ
ಹೋಗಿದ್ದು ಇನ್ನಿಬ್ಬರು ಮಕ್ಕಳಾದ ಪ್ರಕಾಶ್ ರೈ
ಮತ್ತು ವಸಂತ್ ರೈ ಎಲ್ಲವನ್ನೂ
ಕಳೆದು ನಿರಾಶ್ರಿತರಾಗಿದ್ದರು. ಈ ಸಂತ್ರಸ್ಥ ಕುಟುಂಬಕ್ಕೆ
ಸಂದೇಶ್ ರೈ ಬೋಳೋಡಿರವರು 'ಬಂಟ್ಸ್
ಓಮನ್' ಅಧ್ಯಕ್ಷರಾದ ಶಶಿಧರ ಶೆಟ್ಟಿ ಮಾಲಾರು
ಮನವಿಗೆ ಸ್ಪಂದಿಸಿ ರೂ.1 ಲಕ್ಷ ಮೊತ್ತವನ್ನು
ಮೃತರ ಕುಟುಂಬ ಖಾತೆಗೆ ವರ್ಗಾಯಿಸಿರುತ್ತಾರೆ.
ಶಶಿಧರ್
ಶೆಟ್ಟಿ ಮುಂದಾಳತ್ವದಲ್ಲಿ 'ಬಂಟ್ಸ್ ಒಮನ್' ಈ
ಹಿಂದೆ ಹಲವು ಸಮಾಜಮುಖಿ ಕಾರ್ಯಕ್ರಮವನ್ನು
ಮಾಡಿದ್ದು ಶ್ಲಾಘನೆಗೆ ಪಾತ್ರವಾಗಿದೆ.