BUNTS NEWS, ಕಾರ್ಕಳ: ಮಾಳ ಚೌಕಿ ನಿವಾಸಿ ಪ್ರವೀಣ್ ಶೆಟ್ಟಿ ಅವರು ಅಂಗವಿಕಲೆ ಬಾಳಿಗೆ ಬೆಳಕಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪ್ರವೀಣ್ ಶೆಟ್ಟಿ
ಅವರು ಪುಷ್ಪ ಶೆಟ್ಟಿ ಅವರನ್ನು ಮದುವೆಯಾಗುವ ಮೂಲಕ ವಿಕಲಾಂಗತೆ ಎಂಬುದು ದೇಹಕ್ಕೆ ಹೊರತು ಮನಸ್ಸಿಗಲ್ಲ
ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಈಗಾಗಲೇ ಸಾಮಾಜಿಕ
ಜಾಲತಾಣಗಳಲ್ಲಿ ಪ್ರವೀಣ್ ಶೆಟ್ಟಿ ಅವರ ಮದುವೆಯ ಫೋಟೊಗಳು ವೈರಲ್ ಆಗಿದ್ದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಬಂಟ್ಸ್ ನ್ಯೂಸ್
ಪ್ರವೀಣ್ ಶೆಟ್ಟಿ ಅವರ ಸಮಾಜಕ್ಕೆ ಮಾದರಿಯಾಗುವ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದು ದಾಂಪತ್ಯ ಜೀವನ
ಸುಖವಾಗಿರಲೆಂದು ಈ ಮೂಲಕ ಶುಭ ಹಾರೈಸುತ್ತಿದೆ. (ಮಾಹಿತಿ ಕೃಪೆ: ಧನು ಬಜಗೋಳಿ)