ಚಾರ್’ಕೋಪ್ ಕನ್ನಡಿಗರ ಬಳಗದ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ ಗೌರವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಚಾರ್’ಕೋಪ್ ಕನ್ನಡಿಗರ ಬಳಗದ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ ಗೌರವ

Share This
BUNTS NEWS, ಮುಂಬಾಯಿ: ಕಾಂದಿವಲಿ ಪಸ್ಚಿಮ ಚಾರ್ಕೋಪ್ ಪರಿಸರದ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಚಾರ್ಕೋಪ್ಕನ್ನಡಿಗರ ಬಳಗದ 19ನೇ ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನವು . 14 ರಂದು ಕಾಂದಿವಲಿ ಪಶ್ಚಿಮದ ಸೆಕ್ಟರ್‌   6 ಹರ್ಯಾಣ ಭವನದಲ್ಲಿ ಜರಗಿತು.
ಅಡ್ಯಾರು ನಾಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಯನ್ನು ಕ್ಲಾಸಿಕ್ ಹೋಟೇಲಿನ ಮಾಲಕ ಸುರೇಶ್ ಕಾಂಚನ್ ಅವರಿಗೆ ಕೆ.ಕೆ. ಸುವರ್ಣ ಸ್ಮಾರಕ  ಪ್ರಶಸ್ಥಿಯನ್ನು ರಂಗ ನಿರ್ದೇಶಕ  ನಾಗರಾಜ ಗುರುಪುರ ಅವರಿಗೆಹಾಗೂ ಶ್ರೀಮತಿ ಭಾರತಿ ಕೊಡ್ಲೆಕರ್ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ರಂಗ ನಟಿ, ಶಾಲಿನಿ  ರಾವ್ ಅವರಿಗೆ ನೀಡಿ ಗೌರವಿಸಲಾಯಿತು.

ಅಮೇರಿಕಾದ ಗ್ಲೋಬಲ್ ಪೀಸ್  ಪೌಂಡೇಶನ್ ನಿಂದ ಇಂಟರ್ ನೇಷನಲ್ ಮ್ಯಾನ್ ಆಫ್ ಈಯರ್ 2018 ಪ್ರಶಸ್ತಿಯನ್ನು ಪಡೆದ ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿಯವರ ಪರವಾಗಿ ಸಂಘದ ಪದಾದಿಕಾರಿಗಳು ಸ್ವೀಕರಿಸಿದರು, ಚಲನಚಿತ್ರ ಹಾಗೂ ಕಿರಿತೆರೆಯ ನಿರ್ದೇಶಕ ರಾಘವೇಂದ್ರ ಹೆಗ್ಡೆ, ಅಕ್ಕ ಸಮ್ಮೇಳನದಲ್ಲಿ ಮುಂಬಯಿಯ ಪ್ರತಿನಿಧಿಯಾಗಿ ಭಾಗವಹಿಸಿದ ಮುಂಬಯಿಯ ಕವಿ, ಸಾಹಿತಿ ಗೋಪಾಲ ತ್ರಾಸಿಯವರನ್ನು ಗೌರವಿಸಲಾಯಿತು.

ಟ್ರಸ್ಟಿ ಭಾಸ್ಕರ ಸರಪಾಡಿ ಮಾತನಾಡುತ್ತಾ ಹಿಂದೆ ಚಾರ್ ಕೋಪ್ ಪರಿಸರದಲ್ಲಿ ಕನ್ನಡಿಗರು ವಾಸ್ತಾವ ಹೂಡುದಕ್ಕೆ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು ಅದಕ್ಕೆ ಅನುಗುಣವಾಗಿ ಸಂಸದರಾದ ಗೋಪಾಲ ಶೆಟ್ಟಿಯವರ ಸಹಕಾರದಿಂದ ಚಾರ್ ಕೋಪ್ ಕನ್ನಡಿಗರ ಬಳಗ ಹುಟ್ಟುದಕ್ಕೆ ಕಾರಣವಾಯಿತು. ಈಗ ಉತ್ತಮ ರೀತಿಯಲ್ಲಿ ಪದಾಧಿಕಾರಿಗಳು ಸಂಸ್ಥೆಯನ್ನು ಮುನ್ನಡಿಸುತ್ತಿದ್ದಾರೆ.  ಅರ್ಹತೆ ಇದ್ದವರನ್ನು ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವೆವು ಎಂದರು.

ಜತೆ ಕಾರ್ಯದರ್ಶಿ ವಸಂತಿ  ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್‌. ಶೆಟ್ಟಿ  ಅತಿಥಿಗಳನ್ನು ಪರಿಚಯಿಸಿ ಒಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು. ಸನ್ಮಾನಿತರನ್ನು ಹರೀಶ್ ಚೇವಾರ್, ಚಂದ್ರಶೇಖರ ಶೆಟ್ಟಿ ಮತ್ತು ರೂಪಾ ಭಟ್ ಪರಿಚಯಿಸಿದರೆ ವೇದಿಕೆಯ ಗಣ್ಯರನ್ನು ವಸಂತಿ ಸಾಲ್ಯಾನ್,ಕೃಷ್ಣ ಶೆಟ್ಟಿ, ಲತಾ ಬಂಗೇರ, ರಮೇಶ್ ಕೋಟ್ಯಾನ್, ಭಾಸ್ಕರ ಸರಪಾಡಿ, ಶಾಂತಾ ಭಟ್, ಕೃಷ್ಣ ಟಿ ಅಮೀನ್, ಪದ್ಮಾವತಿ ಬಿ. ಶೆಟ್ಟಿ ಗೌರವಿಸಿದರು.

ವೇದಿಕೆಯಲ್ಲಿ ಬಳಗದ ಟ್ರಸ್ಟಿಗಳಾದ ಜಯ ಸಿ. ಶೆಟ್ಟಿ, ಭಾಸ್ಕರ ಸರಪಾಡಿ, ಎಂ. ಎಸ್. ರಾವ್, ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಗೌರಿ ಪಣಿಯಾಡಿ ಉಪಸ್ಥಿತರಿದ್ದರು. ವರದಿ: ಈಶ್ವರ ಎಂ. ಐಲ್, ಚಿತ್ರ: ದಿನೇಶ್ ಕುಲಾಲ್

Pages