ಕದ್ರಿ ಕ್ರಿಕೆಟರ್ಸ್ ಕ್ಲಬ್‍ ರಿದಮಿಕ್ ನೈಟ್: ಕಿಶೋರ್ ಡಿ. ಶೆಟ್ಟಿ, ಯೋಧ ಪ್ರವೀಣ್ ಶೆಟ್ರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕದ್ರಿ ಕ್ರಿಕೆಟರ್ಸ್ ಕ್ಲಬ್‍ ರಿದಮಿಕ್ ನೈಟ್: ಕಿಶೋರ್ ಡಿ. ಶೆಟ್ಟಿ, ಯೋಧ ಪ್ರವೀಣ್ ಶೆಟ್ರಿಗೆ ಸನ್ಮಾನ

Share This
ಮಂಗಳೂರು : ಕದ್ರಿ ಕ್ರಿಕೆಟರ್ಸ್ ಕ್ಲಬ್ (ರಿ) ಇದರ ಆಶ್ರಯದಲ್ಲಿ ರಿದಮಿಕ್ ನೈಟ್ ಕಾರ್ಯಕ್ರಮವು ಕದ್ರಿ ಮೈದಾನದಲ್ಲಿ ಜರಗಿತು.
ಸಮಾರಂಭದಲ್ಲಿ ಜಿಲ್ಲಾ  ಉಸ್ತುವಾರಿ ಸಚಿವ ಯು.ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಭಾಸ್ಕರ್ ಕೆ, ಶಾಸಕ ಡಾ. ವೈ ಭರತ್ ಶೆಟ್ಟಿ , .ಜೆ ಶೆಟ್ಟಿ, ಲಕ್ಷ್ಮೀಶ ಭಂಡಾರಿ, ದಿನೇಶ್ ದೇವಾಡಿಗ ಕದ್ರಿ, ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಮತ್ತು ಯೋಧ ಪ್ರವೀಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಪೋರೇಟರ್ ಡಿ.ಕೆ ಅಶೋಕ್ ಕುಮಾರ್, ಮೋಹನ್ ಕೊಪ್ಪಲ ಕದ್ರಿ, ರತ್ನಾಕರ ಜೈನ್, ಗೋಕುಲ್ ಕದ್ರಿ, ಮಾಜಿ ಮೇಯರ್ ಶಶಿಧರ ಹೆಗ್ಡೆ , ಅಮೃತ ವಿ. ಕದ್ರಿ, ಅಕ್ಷಿತ್ ಸುವರ್ಣ , ಕಿರಣ್ ಜೋಗಿ , ಧನರಾಜ್ , ಗೌರವ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ, ಸಾಧು ಕೋಕಿಲ, ರಘು ದೀಕ್ಷಿತ್, ಅಜಯ ವಾರಿಯರ್, ಅಂಕಿತಾ ಕುಂದು, ನವ್ಯಾ ಜೈತಿ ಭಾಗವಹಿಸಿ ಕಾರ್ಯಕ್ರಮಕ್ಕೆ ತಾರಾಮೆರುಗು ನೀಡಿದರು. ಶಾಹಿಲ್ ರೈ ಮತ್ತು ಮಧು ಮೈಲಾನ್ ಕೊಡಿ ಕಾರ್ಯಕ್ರಮ ನಿರ್ವಹಿಸಿದರು. ಅಗ್ನಿ ಗ್ರೂಪ್ ಬೆಂಗಳೂರು, ರೆವೆಲೇಷನ್ ಡ್ಯಾನ್ಸ್ ಅಕಾಡೆಮಿ ಮತ್ತು ಟೀಮ್ ಡಿಫರೆಂಟ್  ತಂಡಗಳಿಂದ  ನೃತ್ಯ ಸ್ಪರ್ಧೆ ಜರಗಿತು.

Pages