ವಿಶ್ವ ಬಂಟರ ಸಮ್ಮಿಲನ 2018ರ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಕೆ.ಪ್ರಕಾಶ್ ಶೆಟ್ರಿಗೆ ಆಹ್ವಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಶ್ವ ಬಂಟರ ಸಮ್ಮಿಲನ 2018ರ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಕೆ.ಪ್ರಕಾಶ್ ಶೆಟ್ರಿಗೆ ಆಹ್ವಾನ

Share This
BUNTS NEWS, ಬೆಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರು ಎಂಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕೆ.ಪ್ರಕಾಶ್ ಶೆಟ್ಟಿಯವರನ್ನು ಭೇಟಿಯಾಗಿ ಸೆ. 9 ವಿಶ್ವ ಬಂಟರ ಸಮ್ಮಿಲನ 2018 ಸಮಾರೋಪ ಸಮಾರಂಭದ ಉದ್ಘಾಟಕರಲ್ಲಿ ಆಗಮಿಸುವಂತೆ ಆಹ್ವಾನಿಸಿದರು.
ಈ ಸಂದರ್ಭ ಕೆ.ಪ್ರಕಾಶ್ ಶೆಟ್ಟಿಯವರು ಬಂಟರ ಸಮ್ಮಿಲನದ ಯಶಸ್ಸಿಗೆ ಶುಭ ಹಾರೈಸಿದರು. ಮಾತ್ರವಲ್ಲದೆ ಒಕ್ಕೂಟಕ್ಕೆ ನಿರ್ದೇಶಕರಾಗುವ ನಮ್ಮ ವಿನಂತಿಗೆ ಸಮ್ಮತ ವ್ಯಕ್ತಪಡಿಸಿ ಒಕ್ಕೂಟದ ಪ್ರತೀ ಕಾರ್ಯಕ್ರಮಕ್ಕೂ ತಾನಿರುವದಾಗಿ ವಾಗ್ದಾನ ಮಾಡಿದರು . ಹಾಗೆಯೇ ಸಮ್ಮಿಲನದ ಸಂಪೂರ್ಣ ಮಾಹಿತಿಯನ್ನು ಪಡೆದು ಒಕ್ಕೂಟ ನಡೆಸುವ ಸಮಾಜಮುಖಿ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ  ವಿಜಯ ಪ್ರಸಾದ್ ಆಳ್ವ , ಸಮ್ಮಿಲನದ ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ ಉಳ್ತೂರು ಹಾಗೂ ಸಮ್ಮಿಲನದ ನಿರೂಪಕ ಸದಸ್ಯ  ಅಜಿತ್ ಶೆಟ್ಚಿ ಉಳ್ತೂರುರವರು ಉಪಸ್ಥಿತರಿದ್ದರು. ಸುದ್ದಿ:  ದಿನೇಶ್ ಕುಲಾಲ್

Pages