ಹೆಚ್.ಪಿ.ಸಿಎಲ್’ನಿಂದ ಕೇರಳ ಪ್ರವಾಹ ಪೀಡಿತರಿಗೆ ನೆರವು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹೆಚ್.ಪಿ.ಸಿಎಲ್’ನಿಂದ ಕೇರಳ ಪ್ರವಾಹ ಪೀಡಿತರಿಗೆ ನೆರವು

Share This
ಮಂಗಳೂರು: ಹಿಂದೂಸ್ಠಾನ ಪೆಟ್ರೋಲಿಯಂ ಕಾರ್ಪೋರೇಶನ್ ಮಂಗಳೂರು ವಿಭಾಗದ ವತಿಯಿಂದ ಕೇರಳದ ಪ್ರವಾಹ ಪೀಡಿತರಿಗೆ  ಸಹಾಯ ಹಸ್ತ ನೀಡಿತು. ಮಂಗಳೂರು  ವಿಭಾಗದ ಎಲ್ಲಾ  ಗ್ಯಾಸ್ ವಿತರಕರು, ಹೆಚ್ಪಿಸಿಎಲ್ ಅಧಿಕಾರಿಗಳು ಮತ್ತು ಕೆಲಸಗಾರರು ಸೇರಿ 5 ಲಕ್ಷಕ್ಕೂ ಅಧಿಕ ಮೊತ್ತದ ಔಷಧ, ಕಂಬಳಿ ಮತ್ತು ಇತರ ಅಗತ್ಯ ವಸ್ತುಗಳನ್ನು ಕೇರಳಕ್ಕೆ ಕಳುಹಿಸಲಾಯಿತು.
ಮಂಗಳೂರು ವಿಭಾಗದ ಚೀಫ್ ರೀಜನಲ್ ಮ್ಯಾನೇಜರ್ ರಮೇಶ್  ನಾಗರಾಜ್ ಸಂದರ್ಭ ಮಾತನಾಡಿ ಸಂತ್ರಸ್ತರಿಗೆ  ನೆರವು ನೀಡುವುದು ಮಾನವೀಯ ಕರ್ತವ್ಯ. ವಿಭಾಗದ ಎಲ್ಲರು ಇದಕ್ಕೆ ಸಹಕರಿಸಿದುದರಿಂದ ಇದು ಸಾಧ್ಯವಾಯಿತು. ಕೊಡಗಿನ ಸಂತ್ರಸ್ತರಿಗೆ ಸ್ವಲ್ಪ ಸಮಯದ ನಂತರ ಅವರ ಅಗತ್ಯವನ್ನು ನೋದಿ ವಸ್ತುಗಳನ್ನು ಕಳುಹಿಸಲಾಗುವುದು ಎಂದರು.

ಸಂದರ್ಭದಲ್ಲಿ ಸೇಲ್ಸ್ ಆಫೀಸರ್ ಜುನೇದ್, ಪ್ಲಾಂಟ್ ಮ್ಯಾನೇಜರ್ ಆಕಾಶ್, ಎಲ್ಲಾ ಅಧಿಕಾರಿ ವರ್ಗ, ಹೆಚ್.ಪಿ.ಗ್ಯಾಸ್ ವಿತರಕರ ಸಂಘದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಮತ್ತು ಗ್ಯಾಸ್ ವಿತರಕರು, ಸಿಬ್ಬಂದಿ ವರ್ಗದವರು ಉಪಸ್ಠಿತರಿದ್ದರು.

Pages