ವಾಮಂಜೂರು ದೇವರಪದವುನಲ್ಲಿ ಕ್ಲೋತ್ಸ್ ಬ್ಯಾಂಕ್ ಸಂಸ್ಥೆಯಿಂದ ಮಕ್ಕಳಿಗೆ ಬಟ್ಟೆ ವಿತರಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಾಮಂಜೂರು ದೇವರಪದವುನಲ್ಲಿ ಕ್ಲೋತ್ಸ್ ಬ್ಯಾಂಕ್ ಸಂಸ್ಥೆಯಿಂದ ಮಕ್ಕಳಿಗೆ ಬಟ್ಟೆ ವಿತರಣೆ

Share This
ಮಂಗಳೂರು: ಇಲ್ಲಿನ ಕ್ಲಾಥ್ ಬ್ಯಾಂಕ್  ಸಂಸ್ಥೆಯಿಂದ ವಾಮಂಜೂರಿನ ದೇವರಪದವು ಬಳಿಯ ಜ್ಯೋತಿನಗರದಲಿ ಹದಿನಾಲ್ಕು ಮಕ್ಕಳಿಗೆ ಹೊಸ ರೆಡಿಮೇಡ್ ಬಟ್ಟೆಯನ್ನು ಕ್ಲೋತ್ಸ್ ಬ್ಯಾಂಕ್ ಅಧ್ಯಕ್ಷ ರೇಮಂಡ್ ಡೀಕೂನ ಮುಂದಾಳತ್ವದಲ್ಲಿ ವಿತರಿಸಲಾಯಿತು.
ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಸಹಾಯವನ್ನು ಮಾಡಲು ಮನಸ್ಸಿದ್ದು ಯಾರಿಗೆ ಎಂದು ತಿಳಿಯದವರಿಗಾಗಿ ಆಗಿದೆ. ನಾವು ಮಿಗತೆ ಇದ್ದವರಲ್ಲಿ ಪಡೆದು ಅಗತ್ಯದವರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿದ್ದೇವೆ. ದನ್ನು ಯಾರೂ ಮಾಡಬಹುದು. ಅವರವರಿಗೆ ಮಾಡಲು ಆಗದವರು ನಮಗೆ ತಿಳಿಸಿದರೆ ಫಲಾನುಭವಿಗಳನ್ನು ಹುಡುಕಿ ಅವರಿಗೆ ನಿಮ್ಮ ದಾನವನ್ನು ಹೆಸರು ತಿಳಿಸಿ ಅಥವಾ ಬಯಸಿದರೆ ಹೆಸರು ಗುಟ್ಟಾಗಿಸಿ ತಲುಪಿಸುತ್ತೇವೆ ಅಂದರು.

ಸಂದರ್ಭದಲ್ಲಿ ಫಲಾನುಭವಿಗಳನ್ನು ತಲುಪಲು ಸಹಾಯ ಮಾಡುವ ಸುಜಾತಾ ಶೆಟ್ಟಿ ಹಾಗೂ ಹರಿಣಿ ಶೆಟ್ಟಿ,ಹಾಜರಿದ್ದರು. ರೇಣುಕ ಸ್ಸಾಗತಿಸಿದರು. ಶಂಶಾದ್  ವಂದಿಸಿದರು. ಮೋಹನ್ದಾಸ್ ನಿರೂಪಿಸಿದರು.

Pages