BUNTS NEWS, ಮಂಗಳೂರು: ಇದೀಗ ರಚನೆಗೊಂಡ ಕರ್ನಾಟಕ
ಮುಖ್ಯಮಂತ್ರಿ ಶ್ರೀ ಕುಮಾರ ಸ್ವಾಮಿಯವರ ಮಂತ್ರಿ
ಮಂಡಲದಲ್ಲಿ ಕಾಂಗ್ರೆಸ್
ಪಕ್ಷದ ಹಿರಿಯರು 4 ದಶಕಗಳ ಅನುಭವ ಇರುವ,
ಹಾಗೂ 4 ಬಾರಿ ಶಾಸಕರಾಗಿ, ಮೂರನೇ
ಬಾರಿ ವಿಧಾನ ಪರಿಷತ್ ಸದಸ್ಯರಾದ
ಪ್ರತಾಪ್ಚಂದ್ರ ಶೆಟ್ಟಿ ಯವರಿಗೆ
ಸಚಿವ ಸ್ಥಾನವನ್ನು ನಿರಾಕರಿಸಲಾಗಿದೆ.
ಆದರೆ ಅವಿಭಜಿತ ದಕ್ಷಿಣ ಕನ್ನಡ
ಮತ್ತು ಉಡುಪಿ ಜಿಲ್ಲೆಯಲ್ಲಿ ಏಕ
ಮಾತ್ರ ಶಾಸಕ, ವಿಧಾನ ಪರಿಷತ್
ಸದಸ್ಯರಾದ ಪ್ರತಾಪ್ಚಂದ್ರ ಶೆಟ್ಟಿ ಯವರನ್ನ
ಈ ಬಾರಿ ಸಚಿವರನ್ನಾಗಿ
ಆಯ್ಕೆ ಮಾಡಬೇಕಾಗಿತ್ತು.ಆದರೆ ಅವರಿಗೆ ಅವಕಾಶ
ನಿರಾಕರಿಸಿದ್ದಕ್ಕೆ ಹಾಗೂ ಬಂಟ ಸಮಾಜದ
ಅಭ್ಯರ್ಥಿತನವನ್ನು ನಿರಾಕರಿಸಿರುವುದು ಬಹಳ ನೋವನ್ನು ಉಂಟು
ಮಾಡಿದೆ.
ಕಾಂಗ್ರೆಸ್
ಪಕ್ಷದ ಮುಖಂಡರು ಇನ್ನು ಮುಂದೆ
ಪ್ರತಾಪ್ಚಂದ್ರ ಶೆಟ್ಟಿ ಯವರಿಗೆ
ಮುಂದಿನ ಸಂಪುಟ ವಿಸ್ತರಣಾ ಸಂದರ್ಭದಲ್ಲಿ
ಅವಕಾಶ ನೀಡಲು ಈ ಮೂಲಕ
ಆಗ್ರಹಿಸಲಾಗಿದೆ.ಈ ನಿಲುವನ್ನು ಜಾಗತಿಕ
ಬಂಟರ ಸಂಘಗಳ ಒಕ್ಕೂಟ ದ
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,
ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ
ಸದಸ್ಯರು ಈ ಮೂಲಕ ಒತ್ತಾಯಿಸಿರುತ್ತಾರೆ.
ಒಂದು ವೇಳೆ ಸಂಪುಟ ವಿಸ್ತರಣಾ
ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಅವಕಾಶ
ನೀಡದಿದ್ದಲ್ಲಿ ಒಕ್ಕೂಟದ ವತಿಯಿಂದ ಉಗ್ರ
ಪ್ರತಿಭಟನೆ ಮಾಡಲಾಗುವುದು. ಈ ನಿಲುವನ್ನು ವಿಶೇಷವಾಗಿ
ಗಣನೆಗೆ ತೆಗೆದುಕೊಳ್ಳಬೇಕಾಗಿದೆ.