ಮಂಗಳೂರು: ಕರ್ಕಾಟಕ ವೃತ್ತದೆಡೆಗೆ
ಉತ್ತರಕ್ಕೆ ಚಲಿಸುತ್ತಿರುವ ಸೂರ್ಯ ಎ.24ರಂದು
ಮಂಗಳೂರಿನಲ್ಲಿ ಮಧ್ಯಾಹ್ನ ನೆತ್ತಿಯ ಮೇಲೆ ಹಾದು
ಹೋಗುವ ಸಮಯದಲ್ಲಿ ನೆರಳು ಶೂನ್ಯವಾಗುತ್ತದೆ.
ಈ ವಿದ್ಯಮಾನವು ವರ್ಷದಲ್ಲಿ ಎರಡು ಬಾರಿ ನಡೆಯುತ್ತದೆ.
ಸೂರ್ಯನು ಉತ್ತರಕ್ಕೆ ಚಲಿಸಿದಾಗ ಮತ್ತು ನಂತರ ದಕ್ಷಿಣಕ್ಕೆ
ಬರುವಾಗ ಮಧ್ಯಾಹ್ನದ ಶೂನ್ಯ ನೆರಳಿನ ವಿದ್ಯಮಾನ
ಸಂಭವಿಸುತ್ತದೆ. ಈ ಘಟನೆ ಸಂಭವಿಸುವ ದಿನಾಂಕಗಳು ಆಯಾ ಸ್ಥಳಗಳ ಅಕ್ಷಾಂಶಗಳ
ಮೇಲೆ ಅವಲಂಬಿತವಾಗಿರುತ್ತದೆ. ಅವುಗಳನ್ನು ZSD App ಮೂಲಕ
ತಿಳಿದುಕೊಳ್ಳಬಹುದು.
ಭೂಮಿಯ ಭ್ರಮಣೆ ಅಕ್ಷವು 23.5 ಡಿಗ್ರಿ
ವಾಲಿರುವುದರಿಂದ ಕರ್ಕಾಟಕ ಮತ್ತು ಮಕರ
ಸಂಕ್ರಾತಿ ವೃತ್ತಗಳ ಒಳಭಾಗದಲ್ಲಿ ಈ
ವಿದ್ಯಮಾನವು ವಿವಿಧ ಸ್ಥಳಗಳಲ್ಲಿ ಬೇರ
ಬೇರೆ ದಿನಗಳಲ್ಲಿ ಸಂಭವಿಸುತ್ತದೆ. ಇದರ ಪ್ರಾತ್ಯಕ್ಷಿಕೆ ಯಾರು
ಬೇಕಾದರೂ ಮಾಡಿ ನೋಡಬಹುದು.
ಮಂಗಳೂರಿನಲ್ಲಿ
ಎ.24ರಂದು ಮಧ್ಯಾಹ್ನ 12.29ಕ್ಕೆ
ನಡೆಯುವ ಇದನ್ನು
ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಪಿಲಿಕುಳ ಪ್ರಾದೇಶಿಕ
ವಿಜ್ಞಾನ ಕೇಂದ್ರದಲ್ಲಿ ನಿರೂಪಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.