ಶೇಣಿ ನೂರು ಸಂಸ್ಮರಣೆ: ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಅವರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶೇಣಿ ನೂರು ಸಂಸ್ಮರಣೆ: ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಅವರಿಗೆ ಸನ್ಮಾನ

Share This
ಮಂಗಳೂರು: ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್, ಸುರತ್ಕಲ್ ಇವರ ವತಿಯಿಂದ‌‌, ದೇರಳಕಟ್ಟೆ ತಲ್ಲಂಗಡಿ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ, ಶೇಣಿ ನೂರು ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ, ಗುರು - ಶಿಷ್ಯರ ಸಂಸ್ಮರಣೆಯಾಗಿ, ತಲ್ಲಂಗಡಿ ಮನೆತನದ ದಿ. ಕವಿಭೂಷಣ ಕೆ.ಪಿ.ವಂಕಪ್ಪ ಶೆಟ್ಟಿ ಮತ್ತು ಅವರ ಶಿಷ್ಯ ದಿ. ಶೇಣಿ ಗೋಪಾಲಕೃಷ್ಣ ಭಟ್ ಇವರ ಸಂಸ್ಮರಣಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಭಾಸ್ಕರ್ ರೈ ಕುಕ್ಕುವಳ್ಳಿ ಇವರಿಗೆ ಸಂಮಾನ ಕಾರ್ಯ ಕ್ರಮ ತಲ್ಲಂಗಡಿ ಮನೆಯಲ್ಲಿ ನಡೆಯಿತು.
ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್, ಸುರತ್ಕಲ್ ಪಿ ವಿ ರಾವ್ ಕಾರ್ಯ ಕ್ರಮ ಸಂಯೋಜಿಸಿ, ಶೇಣಿಯವರ ಸಂಸ್ಮರಣೆ ಮಾಡಿದರು. ತಲ್ಲಂಗಡಿ ಮನೆಯವರಾಗಿ, ನೇತೃತ್ವ ವಹಿಸಿದ ಗಣೇಶ್ ಕಾವ ಸ್ವಾಗತಿಸಿ, ಕವಿಭೂಷಣ ವೆಂಕಪ್ಪ ಶೆಟ್ಟಿ ( ಪಕೀರ ಶೆಟ್ಟಿ) ಯವರ ವ್ಯಕ್ತಿತ್ವವನ್ನು ನೆನಪಿಸಿದರು. ತಲ್ಲಂಗಡಿ ಮನೆತನಕ್ಕೆ ಸೇರಿದ ಮಾಜಿ ಶಾಸಕ ಕುತ್ತಾರುಗುತ್ತು ಜಯರಾಮ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಫ್ರೊ.ಡಾ. ಪ್ರಭಾಕರ್ಜೋಷಿ ಶುಭಾಶಂಸನೆಗೈದರು. ಯಕ್ಷಗಾನ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅಭಿನಂದಿಸಿದರು. ತಲ್ಲಂಗಡಿ ಮನೆತನದ ಹಿರಿಯರು ಶ್ಯಾಮ ಸುಂದರ್ ಶೇಖ, ಡಾ.ಜಯರಾಮ ಮುದ್ಯ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಕವಿಭೂಷಣ ವೆಂಕಪ್ಪಶೆಟ್ಟಿ ವಿರಚಿತ " ಸಾಹಸ ಭೀಮ ವಿಜಯ" ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.

Pages