ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು :
ಮಹಿಳಾ ವೇದಿಕೆ ಬಂಟರ ಸಂಘ(ರಿ) ಸುರತ್ಕಲ್ ಇದರ
ಆಶ್ರಯದಲ್ಲಿ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯ
ಬಂಟ ಮಹಿಳಾ ಸಮಾವೇಶ 2018 ‘ಅಸ್ಮಿತೆ’
ಕಾರ್ಯಕ್ರಮವು ಎಪ್ರಿಲ್ 8ರಂದು ಭಾನುವಾರ ಬೆಳಿಗ್ಗೆ
9.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ.
ಬಂಟ ಮಹಿಳೆಯರ ಸಂಘಟನೆಯ ಸದುದ್ದೇಶದಿಂದ
ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದೆ. ಸುಮಾರು 18 ಗ್ರಾಮಗಳನ್ನೊಳಗೊಂಡ ಸುರತ್ಕಲ್
ಬಂಟರ ಸಂಘದ ವ್ಯಾಪ್ತಿಯ ಮಹಿಳೆಯರನ್ನು
ಒಂದೇ ಸೂರಿನಡಿ ಸೇರಿಸುವ
ಕಾರ್ಯಕ್ರಮ ಇದಾಗಿದೆ ಎಂದು ಮಹಿಳಾ
ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ
ಮಹಿಳಾ ವೇದಿಕೆಯು ಗ್ರಾಮ ವ್ಯಾಪ್ತಿಯ ಘಟಕಗಳನ್ನು
ಸ್ಥಾಪಿಸುವ ಮೂಲಕ ಮಹಿಳಾ ಸದಸ್ಯರ
ಬಲವನ್ನು ಹೆಚ್ಚಿಸಿಕೊಂಡಿದೆ. ಪಟ್ಟಣ ಮತ್ತು ಗ್ರಾಮೀಣ
ಭಾಗದ ಮಹಿಳೆಯರನ್ನು ಸಂಘಟಿತರಾಗಲು ಒಟ್ಟುಗೂಡಿಸಿ ಅವರಲ್ಲಿ ಆತ್ಮಸ್ಥೈರ್ಯ ಮತ್ತು
ಸ್ಪೂರ್ತಿ ತುಂಬಿಸುವುದಕ್ಕಾಗಿ ಮಹಿಳಾ ಸಮಾವೇಶ ನಡೆಸಲಾಗುತ್ತಿದೆ.
ಸಮಾವೇಶದಲ್ಲಿ ಮಹಿಳಾ ನಾಯಕಿಯರು, ಸಾಧಕಿಯರು,
ವಿಷಯ ಪರಿಣಿತರು, ಸಂಪನ್ಮೂಲ ವ್ಯಕ್ತಿಗಳು, ಪ್ರತಿಭಾನ್ವಿತರು, ಕಲಾವಿದೆಯರು ಪಾಲ್ಗೊಂಡು ಮಹಿಳೆಯರಲ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡಲಿದ್ದಾರೆ.
ಎಪ್ರಿಲ್8
ರಂದು ಬೆಳಿಗ್ಗೆ 9.30ಕ್ಕೆ ಸಮಾರಂಭದ ಉದ್ಘಾಟನೆಯನ್ನು
ಬಂಟರ ಮಾತೃಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ
ಡಾ. ಆಶಾಜ್ಯೋತಿ ರೈ ಮಾಲಾಡಿ ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ಪುತ್ತೂರು ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ, ಹಾಸ್ಯ
ಲೇಖಕಿ ಭುವನೇಶ್ವರಿ ಹೆಗಡೆ, ಮೂಡಬಿದ್ರೆ ಇನ್ನರ್
ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ
ಅಮರನಾಥ ಶೆಟ್ಟಿ, ಪಡುಬಿದ್ರೆ ಬಂಟರ
ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ
ಅಕ್ಷತಾ ಎಸ್. ಶೆಟ್ಟಿ, ಸುರತ್ಕಲ್
ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್
ಆರ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಮಾರಂಭದ
ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ
ಚಂದ್ರಕಲಾ ಶೆಟ್ಟಿ ವಹಿಸಲಿದ್ದಾರೆ.
ವಿಚಾರಗೋಷ್ಠಿ: ಬೆಳಿಗ್ಗೆ 11.30ಕ್ಕೆ ಸಾಂಸಾರಿಕ ಮತ್ತು
ಸಾಮಾಜಿಕ ಜವಾಬ್ದಾರಿಗಳ ನಡುವೆ ಹೆಣ್ಣಿನ ಹೆಮ್ಮೆಯ
ಅಸ್ತಿತ್ವದ ಹುಡುಕಾಟ ವಿಚಾರದಲ್ಲಿ ವಿಚಾರಗೋಷ್ಠಿ
ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕಿ ಪ್ರಮೀಳಾರಾವ್, ಡಾ. ನಿಕೇತನ, ಚಲನಚಿತ್ರ
ನಟಿ ಉಷಾ ಭಂಡಾರಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಸಾಂಸ್ಕøತಿಕ
ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ಮ 2 ಗಂಟೆಗೆ ಸಂಧ್ಯಾ ಶೆಣೈ
ಉಡುಪಿ ಇವರಿಂದ ಹಾಸ್ಯ ಲಹರಿ
ನಡೆಯಲಿದೆ. ಸಂಜೆ 3.00 ಗಂಟೆಗೆ ಡಾ. ವಿನಯ
ಪೂರ್ಣಿಮಾ ಅವರಿಂದ ವ್ಯಕ್ತಿತ್ವ ವಿಕಸನ
ಕಾರ್ಯಕ್ರಮ ಜರಗಲಿದೆ.
ಸಂಜೆ5 ಗಂಟೆಗೆ ಸಮಾರೋಪ ಸಮಾರಂಭ
ನಡೆಯಲಿದ್ದು, ಚಂದ್ರಕಲಾ ಬಿ.ಶೆಟ್ಟಿ ಅಧ್ಯಕ್ಷತೆ
ವಹಿಸಲಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷ
ಕೃಪಾ ಅಮರ್ ಆಳ್ವ ಸಮಾರೋಪ
ಭಾಷಣ ಮಾಡಲಿದ್ದಾರೆ. ಮುಖ್ಯ
ಅತಿಥಿಗಳಾಗಿ ಶ್ರೀ ದೇವಿ ವಿದ್ಯಾ
ಸಂಸ್ಥೆಯ ನಿರ್ದೇಶಕಿ ಮೈನಾ ಎಸ್. ಶೆಟ್ಟಿ
, ಕಾರ್ಕಳ ಬಂಟ ಮಹಿಳಾ ಒಕ್ಕೂಟದ
ಅಧ್ಯಕ್ಷೆ ಜ್ಯೋತಿ ಸುನೀಲ್ ಶೆಟ್ಟಿ
ಹಾಗೂ ಸಂಘದ ಅಧ್ಯಕ್ಷ ಉಲ್ಲಾಸ್
ಆರ್ ಶೆಟ್ಟಿ ಭಾಗವಹಿಸಲಿದ್ದಾರೆ.
ಮಹಿಳಾ ಸಶಕ್ತೀಕರಣದ ಮೂಲಕ ಒಟ್ಟು ಸಮಾಜದ
ಒಳಿತನ್ನು ಸಾಧಿಸುವ ಸದುದ್ದೇಶದೊಂದಿಗೆ ಈ
ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಹಿಳಾ ವೇದಿಕೆಯ
ಕಾರ್ಯದರ್ಶಿ ವಿಜಯ ಭಾರತಿ ಶೆಟ್ಟಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.