ಉದ್ಯಮಿ, ಕೊಡುಗೈದಾನಿ ಪಾಪ್ಯುಲರ್ ಜಗದೀಶ್ ಶೆಟ್ಟಿ ಮರವೂರು ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉದ್ಯಮಿ, ಕೊಡುಗೈದಾನಿ ಪಾಪ್ಯುಲರ್ ಜಗದೀಶ್ ಶೆಟ್ಟಿ ಮರವೂರು ನಿಧನ

Share This
ಬಂಟ್ಸ್ ನ್ಯೂಸ್, ಮಂಗಳೂರು: ಮುಂಬೈಯಲ್ಲಿ ಹೋಟೆಲ್ ಉದ್ಯಮಿ ಮರವೂರಿನ ಪಾಪ್ಯುಲರ್ ಜಗದೀಶ್ ಶೆಟ್ಟಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
Popular Jagadish Shetty
1986-87ರಲ್ಲಿ ಬಜ್ಪೆಯ ಮರವೂರಿಗೆ ಆಗಮಿಸಿ ತಮ್ಮೂರಿನ ಅಭಿವೃದ್ಧಿಯ ಜೊತೆಗೆ ಹಿಂದು-ಮುಸ್ಲಿಂ ಸೌಹಾರ್ದತೆಯ ಕನಸು ಕಂಡಿದ್ದ ಪಾಪ್ಯುಲರ್ ಜಗದೀಶ್ ಶೆಟ್ಟಿ ಅವರು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಬಜ್ಪೆಯಲ್ಲಿ ಸೌಹಾರ್ದ ಸಮಿತಿ ಸ್ಥಾಪಿಸಿ ಊರಿನಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಿಸಿದ್ದ ಮರವೂರು ಜಗದೀಶ್ ಶೆಟ್ಟಿಯವರು ಊರಿನ ಮಕ್ಕಳಿಗಾಗಿ ಪಾಪ್ಯುಲರ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು.

ಕೊಡುಗೈ ದಾನಿಯಾಗಿದ್ದ ಜಗದೀಶ್ ಶೆಟ್ಟಿ ಅವರು ಕಟೀಲು ಶ್ರೀ ದೇವಿಯ ಭಕ್ತನಾಗಿ ದೇವಳದಲ್ಲಿ ನಾನಾ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

Pages