BUNTS NEWS, ಮಂಗಳೂರು: ಬಂಟ್ಸ್ ಹಾಸ್ಟೆಲ್ ಓಂಕಾರನಗರ
ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ
ಕಛೇರಿ ಉದ್ಘಾಟನೆ ನಿನ್ನೆ ಬಂಟ್ಸ್ ಹಾಸ್ಟೆಲ್ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ನೆರವೇರಿಸಲಾಯಿತು. ರೋಟರಿ
ಕ್ಲಬ್ ಮಂಗಳೂರು ಉತ್ತರದ ಅಧ್ಯಕ್ಷ
ಪಾಂಡುರಂಗ ಶೆಟ್ಟಿ ಹಾಗೂ ಮಾಜಿ
ಸೈನಿಕರ ಸೊಸೈಟಿಯ ಅಧ್ಯಕ್ಷ ವಿಕ್ರಂದತ್ತ
ಅವರು ನೂತನ ಕಛೇರಿಯನ್ನು ದೀಪ
ಬೆಳಗಿಸಿ ಉದ್ಘಾಟಿಸಿದರು.
ಸಭೆಯಲ್ಲಿ
ಉಪಸ್ಥಿತರಿದ್ದ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಸಿ ಅಜಿತ್ ಕುಮಾರ್
ರೈ ಮಾಲಾಡಿ ಮಾತನಾಡಿ
ಸೆಪ್ಟೆಂಬರ್ 5ರಿಂದ 7ರ ವರೆಗೆ ಬಂಟ್ಸ್
ಹಾಸ್ಟೆಲ್ನ ಓಂಕಾರ ನಗರದಲ್ಲಿ
ನಡೆಯುವ 13ನೇ ವರ್ಷದ ಸಾರ್ವಜನಿಕ
ಗಣೇಶೋತ್ಸವ ಸಮಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದೆ
ಎಂದರು.
ವೇದಿಕೆಯಲ್ಲಿ
ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ,
ನಿಟ್ಟೆಗುತ್ತು ರವಿರಾಜ ಶೆಟ್ಟಿ, ಬಾಲಕೃಷ್ಣ
ಶೆಟ್ಟಿ ಬೆಳ್ಳ್ಳಿಬೆಟ್ಟು ಗುತ್ತು, ಕೃಷ್ಣಪ್ರಸಾದ್ ರೈ
ಬೆಳ್ಳಿಪ್ಪಾಡಿ, ಮಂಗಳೂರು ತಾಲೂಕು ಸಮಿತಿಯ
ಸಂಚಾಲಕ ಜಯರಾಮ ಸಾಂತ, ಸಿಎ
ಮನಮೋಹನ್ ಶೆಟ್ಟಿ, ಉಮೇಶ್ ರೈ
ಪದವು ಮೇಗಿನಮನೆ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಾನ್ವಷಣೆ
ಸಮಿತಿಯ ಸಂಚಾಲಕಿ ಡಾ. ಆಶಾಜ್ಯೋತಿ
ರೈ ಅವರು ಮಾತನಾಡಿ ಆಗೋಸ್ಟ್
28ರಂದು ಶ್ರೀ ರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ನಡೆಯುವ
ಬಂಟ ಕ್ರೀಡೋತ್ಸವ ಮತ್ತು ಆ. 27ರಂದು
ಶುಕ್ರವಾರ ಸಂಜೆ 4.30ಕ್ಕೆ ನಡೆಯುವ ಗಣೇಶೋತ್ಸವ ಸಮಿತಿಯ
ಮಹಾಸಭೆಯ ಕುರಿತು ಮಾಹಿತಿ ನೀಡಿದರು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ
ಶಾಂತಾರಾಮ ಶೆಟ್ಟಿ ಸ್ವಾಗತಿಸಿ, ಪ್ರಧಾನ
ಕಾರ್ಯದರ್ಶಿ ದಿವಾಕರ
ಸಾಮಾನಿ ಚೇಳಾೈರ್ ಗುತ್ತು ವಂದಿಸಿದರು. ಸುಖೇಶ್ ಚೌಟ ಕಾರ್ಯಕ್ರಮ
ನಿರ್ವಹಿಸಿದರು.