ಸುರತ್ಕಲ್: ಕಲಾಕ್ಷೇತ್ರ ಮತ್ತು ಸಮಾಜ ಸೇವೆಯಲ್ಲಿ ದುಡಿದು ಸಾಧನೆಗೈದಿರುವ ಆಶಾ ಶೆಟ್ಟಿ ಶಿಬರೂರು ಅವರನ್ನು ಇತ್ತೀಚೆಗೆ ಶಿಬರೂರು ದೇಲಂತಬೆಟ್ಟು ಶಾಲಾ ಸಭಾಂಗಣದಲ್ಲಿ ಮಹಿಳಾ ಮಂಡಲದಲ್ಲಿ ನಡೆದ ಜೆಸಿಐ ಗಣೇಶಪುರ ಇವರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
![](https://blogger.googleusercontent.com/img/b/R29vZ2xl/AVvXsEjPJY5nOkQmDjDn4_onUiT5j51NHewZgMPkRd4rizVLi28uspu4RFfV1Yxnz-syYKCiVxGPOZcd7Tp5loGaqPGcTmAkANVTsGH1iPzBMT_ZYNlpOcCrc4kqaSkwwfxf51Gtc2brU53EoKr_VzUCMdGI_tY5I44Nn8NpxH061BT9jqJjpskZwJqVE5OcPA/s16000/IMG_20230310_103821_copy_640x430.jpg)
![](https://blogger.googleusercontent.com/img/b/R29vZ2xl/AVvXsEj9pZTerVvR25DTI15UwVaOfuLH8fyJLAb2LvgOj1lqqYSEkVpZBfmXrKnebtpyYjws0L1sEcrVK3KotRb7kfmFmQyaCJPZBUDHe-6ZEgOfVK-co9ag0almIuUO9-taxeq5KEM0ZUnfbRTZnOrLZkk4mSE4xLqCfFCpNN9S33DzV_8GAg7Sz0ZrUIqK8w/s16000/IMG_20230310_103821_copy_640x430.jpg)
ಆಶಾ ಶೆಟ್ಟಿ ಅವರು, ನಾಟಕ, ಸಿನಿಮಾ ಯಕ್ಷಗಾನ ಕ್ಷೇತ್ರಗಳಲ್ಲಿ ಅಭಿನಯಿಸಿರುವುದರ ಜೊತೆಗೆ ಧಾರ್ಮಿಕ, ಶೈಕ್ಷಣಿಕ, ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಆಶಾ ಅವರು ಸುರತ್ಕಲ್ ಬಂಟರ ಸಂಘದ ನಿರ್ದೇಶಕಿಯಾಗಿ, ಶಿಬರೂರು-ದೇಲಂತಬೆಟ್ಟು ಮಹಿಳಾ ಮಂಡಲದ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೇದಿಕೆಯಲ್ಲಿ ಗಣೇಶಪುರ ಜೆಸಿಐ ಅಧ್ಯಕ್ಷ ಸನತ್ ಕುಮಾರ್, ಮಹಿಳಾ ಮಂಡಲದ ಅಧ್ಯೆಕ್ಷೆ ಸುಪ್ರಜಾ ಪ್ರಸಾದ್, ಗೀತಾ ಶೆಟ್ಟಿ ಉಪಸ್ಥಿತರಿದ್ದರು.