ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್, ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಸಹಯೋಗದೊಂದಿಗೆ ಬಂಟರ ಕ್ರೀಡೋತ್ಸವವು ರವಿವಾರ ಇಲ್ಲಿನ ಗೋವಿಂದದಾಸ ಕಾಲೇಜ್ ಕ್ರೀಡಾಂಗಣದಲ್ಲಿ ಜರುಗಿತು.
![](https://blogger.googleusercontent.com/img/b/R29vZ2xl/AVvXsEg94lXM47ewFl7m2GRjc6HYrQ0wJUy-FscyPJSXQn1UT9UNx1Qz8c8Y65akizOmbQ4bMtFgHnfhybufigfbmZ8aYQW4P2j6o0wkGjnUH_4GU0Vq4l8TRgFqbwLbcVEMFhXzYd95RwdLS3W3FVm1WXX3xEFByk6bZFTgHodK17a5qxBxlN6bcV_-N2BsXg/s16000/IMG_20230124_080937_copy_640x441.jpg)
![](https://blogger.googleusercontent.com/img/b/R29vZ2xl/AVvXsEgADY1_1mc2ISWZXrkAMECRRLjyJZqEZxpCTzKx5JUlCnKEKdfMlL8Tq2IXDtPNG3RPq_vpcbCfct-D4IDdUQzWQ-DLboTPCWkvIANwcRF4FPKTWr_KmDIsjYeMuQL-1i6snvP1g4wKO2ns8V5ksUxpEAP92tUs_zk67q3N9gt6TzjItB7fAPFMTKVg5w/s16000/IMG_20230124_080820_copy_640x333.jpg)
![](https://blogger.googleusercontent.com/img/b/R29vZ2xl/AVvXsEi6W0VDlfjDMjJxwmHSHyjEpasOR6MoBQ5mT8XEJvMrILhK_TNHO6-55CjKTjitTyHa664Ju1NnGEak-EphLnYIlZdp-NRbkFrZBZF1M6fZh2iiMn4k2FFOLSgneA0GP4GyXZ2gZurP5ABEfZ5lBIIO8SObDUwCbi-QUP2Pqa_x7pwI1kz-9Lr1w1hXXw/s16000/IMG_20230124_080849_copy_640x331.jpg)
![](https://blogger.googleusercontent.com/img/b/R29vZ2xl/AVvXsEhX2ouonXCsZ-_szfJEmkyufMx3E5Xr937aYb45hF9f9XIYuTr60x9OZTVvg5qIo3f1ws-UVy2JaEaJl3W3yr0E_iIJiJX5xgU_OM3hJOazlHS5eC9UZGyMBe0R92GxwutnAnPkyZuCN1nslJk-qNIP7V3Qu8lXb3BhVMjiZcSzd_o48jSN7jIJ3zDhDQ/s16000/IMG_20230124_081004_copy_640x321.jpg)
![](https://blogger.googleusercontent.com/img/b/R29vZ2xl/AVvXsEheAWcqMQi5geIsSqzKrF0b-JfIAPwD2NJcx5SM6qI0x9DfX4vp1uu7wSARuSEsfD-VgtGVDb4jTuAkyV_xEfxq005ZWdi-bamgb1m825j-qEpn5k1aM0CQcuead3ygC0eaBZ2fY0-0JMSvlPejLr6-CZNV2g-tQJb-KDpPChd3o-eifmRgY1fIQLsL4g/s16000/IMG_20230124_081047_copy_640x321.jpg)
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಸುರತ್ಕಲ್ ಬಂಟರ ಸಂಘ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತರ ಸಂಘಟನೆಗಳಿಗೆ ಮಾದರಿಯಾಗಿ ಬೆಳೆದಿದೆ. ಸಂಘದ ಕಾರ್ಯ ಚಟುವಟಿಕೆಗಳು ಇದೇ ರೀತಿ ನಿತ್ಯ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆಎಂ ಶೆಟ್ಟಿ ಮಾತನಾಡಿ, ಕ್ರೀಡೆಗೆ ಉತ್ತೇಜನ ನೀಡುವ ಅಗತ್ಯ ಇದೆ. ಕ್ರೀಡೆಯಲ್ಲಿ ಬಹಳಷ್ಟು ಮಂದಿ ಬಂಟ ಪ್ರತಿಭಾವಂತರಿದ್ದಾರೆ ಎಂದರು.
ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ ಅವರು, ಬಂಟರಲ್ಲಿ ಹುಟ್ಟುವಾಗಲೇ ನಾಯಕತ್ವ ಗುಣವಿದೆ. ಸಮಾಜದಲ್ಲಿ ಒಗ್ಗಟ್ಟಿನಿಂದ ಮುಂದಾಳತ್ವ ಪಡೆದುಕೊಂಡಿರುವ ಬಂಟ ಸಮಾಜ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಪೂಂಜಾ ಮಾತಾಡುತ್ತಾ, ಬಂಟರ ಕ್ರೀಡೋತ್ಸವ ವರ್ಷದಿಂದ ವರ್ಷಕ್ಕೆ ಚೆನ್ನಾಗಿ ನಡೆಯುತ್ತಿದೆ. ಇದಕ್ಕೆ ಸಂಘದ ಎಲ್ಲಾ ಸದಸ್ಯರು, ಯುವ ಸಂಘಟಕರ ಶ್ರಮ ಮತ್ತು ಮಹಿಳಾ ವೇದಿಕೆಯ ಪ್ರೋತ್ಸಾಹ ಕಾರಣ. ಎಲ್ಲರಿಗೂ ಸಂಘವು ಅಭಾರಿಯಾಗಿದೆ ಎಂದರು.
ವೇದಿಕೆಯಲ್ಲಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಬಿತ ಜೆ. ಶೆಟ್ಟಿ, ಮಂದಾರತಿ ಎಸ್. ಶೆಟ್ಟಿ, ಸಾನ್ವಿ ಶೆಟ್ಟಿ, ಶ್ರೇಯ ಶೆಟ್ಟಿ, ಲಾಸ್ಯ ಶೆಟ್ಟಿ, ಅರುಷ್ ಎಸ್. ಶೆಟ್ಟಿ, ಶ್ರೇಯಸ್ ಎಸ್ ಶೆಟ್ಟಿ ಅವರನ್ನು ಅತಿಥಿಗಳು ಶಾಲು ಹೊದಿಸಿ ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಕ್ಟೇರ್ ಟ್ರಸ್ಟ್ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ರಾಜ್ಗೋಪಾಲ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಉದ್ಯಮಿ ಬಾಳ ಸಾನದ ಹೊಸಮನೆ ದೇವದಾಸ ಕೆ. ಶೆಟ್ಟಿ, ಕೆಎಂಎಫ್ ಇದರ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪಿ. ಶೆಟ್ಟಿ, ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಉಲ್ಲಾಸ್ ಆರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಂಘಟನಾ ಕಾರ್ಯದರ್ಶಿ ದೇವೇಂದ್ರ ಕೆ. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಕ್ರೀಡಾ ಕಾರ್ಯದರ್ಶಿ ಹರೀಶ್ ಕೆ. ಶೆಟ್ಟಿ , ಅಕ್ಷತಾ ಗುಣಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಅನೂಪ್ ಶೆಟ್ಟಿ ಪ್ರಾರ್ಥಿಸಿ ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಶೆಟ್ಟಿ ಸುರತ್ಕಲ್ ವಂದಿಸಿದರು.