ಮುಂಬೈ ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳಲಿದೆ ಯಶಸ್ವಿ ಉದ್ಯಮಿ, ಕೊಡುಗೈ ದಾನಿ ಡಾ| ರವಿ ಶೆಟ್ಟಿ ಮೂಡಂಬೈಲು ಅವರ ಜೀವನ ಸಾಧನೆಯ 'ರವಿತೇಜ' ಕೃತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಂಬೈ ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳಲಿದೆ ಯಶಸ್ವಿ ಉದ್ಯಮಿ, ಕೊಡುಗೈ ದಾನಿ ಡಾ| ರವಿ ಶೆಟ್ಟಿ ಮೂಡಂಬೈಲು ಅವರ ಜೀವನ ಸಾಧನೆಯ 'ರವಿತೇಜ' ಕೃತಿ

Share This
ಮಂಗಳೂರು : ಅತ್ಯಂತ ಶ್ರಮವಹಿಸಿ ದುಡಿದು ಯಶಸ್ವಿ ಉದ್ಯಮಿಯಾಗಿ ಇಂದು ನೂರಾರು ಜನರಿಗೆ ಉದ್ಯೋಗದಾತರಾಗಿರುವ ಹಾಗೂ ತಮ್ಮ ಸಮಾಜಸೇವೆಯ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಬೆಳಕಾಗಿರುವ, ಕೊಡುಗೈ ದಾನಿ ಡಾ| ರವಿ ಶೆಟ್ಟಿ ಮೂಡಂಬೈಲು, ಕತಾರ್ ಅವರ ಸಾಧನೆಯ ಬಗ್ಗೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು 'ರವಿತೇಜ' ಹೆಸರಿನಲ್ಲಿ ಪುಸ್ತಕ ಪ್ರಕಟಿಸಲಿದೆ.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು 'ರವಿತೇಜ' ಕೃತಿ ರಚನೆ ಮಾಡಿದ್ದು ಡಾ| ರವಿ ಶೆಟ್ಟಿ ಮೂಡಂಬೈಲು ಅವರ ಜೀವನ ಸಾಧನೆಯ ಬಗ್ಗೆ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಅಭೂತಪೂರ್ವ ಕೃತಿ ಬಿಡುಗಡೆಗೊಳ್ಳಲಿದ್ದು ಯುವಜನತೆಗೆ ಸಾಧನೆಗೆ ಪ್ರೇರಣೆಯಾಗಬಲ್ಲುದು.

ತಮ್ಮ ಸ್ನೇಹಪರತೆಯಿಂದ, ಸಮಾಜ ಸೇವೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಡಾ| ರವಿ ಶೆಟ್ಟಿ ಮೂಡಂಬೈಲು ಅವರ ಜೀವನ ಸಾಧನೆಯ ಬಗ್ಗೆ ಕೃತಿ ಪ್ರಕಟಗೊಳ್ಳತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಕೊಡುಗೈ ದಾನಿ ‘ರವಿ ಅಣ್ಣ’ ಎಂದೇ ಖ್ಯಾತರಾಗಿರುವ ಡಾ. ರವಿ ಶೆಟ್ಟಿ ಮೂಡಂಬೈಲು ಅವರು ಕತಾರ್’ ಎಟಿಎಸ್ ಗ್ರೂಪಿನ ವ್ಯವಸ್ಥಾಪಕ ನಿರ್ದೇಶಕರು. ರವಿ ಶೆಟ್ಟಿ ಅವರ ಉದಾತ್ತ ಸಮಾಜ ಸೇವೆಯನ್ನು ಭಾರತ ಹಾಗೂ ವಿದೇಶಗಳಲ್ಲಿ ಹಲವಾರು ಸಂಘ-ಸಂಸ್ಥೆಗಳು, ಸರ್ಕಾರ ಗುರುತಿಸಿ ಸನ್ಮಾನಿಸಿ ಗೌರವಿಸಿದೆ. ಅವುಗಳಲ್ಲಿ ಮದರ್ ತೇರೆಸಾ ಸಾಮಾಜಿಕ ಸಾಮರಸ್ಯ ಪ್ರಶಸ್ತಿ, ಮುಂಬೈ ಕಲಾಸಂಪದದ ರಾಜರತ್ನ ಪ್ರಶಸ್ತಿ, ಸಮಾಜ ಸೇವೆಗಾಗಿ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಸೃಷ್ಟಿ ಕಲಾಭೂಮಿಯ ತುಳುನಾಡ ಬೊಳ್ಳಿ ಪ್ರಶಸ್ತಿ, ಕರ್ನಾಟಕ ಸಂಘ ಕತಾರ್’ನಿಂದ ಅಭಯಾಂತರಾಶ್ರಿ ಪ್ರಶಸ್ತಿ, ಸಮಾಜ ಸೇವೆಗಾಗಿ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಉದ್ಯಮಶೀಲತೆ ಹಾಗೂ ಸಮಾಜ ಸೇವೆಗಾಗಿ ಕೈರಾಲಿ ವಾಹಿನಿ ನೀಡುವ ಕತಾರ್ ಎನ್ಆರ್’ಐ ಪ್ರಶಸ್ತಿ ಹಾಗೂ ದೋಹಾ ಫಸ್ಟ್ ಎಡಿಷನ್ 2017ರ ಗೋಲ್ಡನ್ ಆಚಿವ್ಮೆಂಟ್ ಆವಾರ್ಡ್, ಸಮಾಜ ಸೇವೆಗಾಗಿ 2020ರ ಇಂಧೋರ್'ನಲ್ಲಿ ನಡೆದ ಆತ್ಮನಿರ್ಭರ ಭಾರತ ರಾಷ್ಟ್ರೀಯ ಸಮ್ಮೇಳನದಲ್ಲಿ ನೆಲ್ಸನ್ ಮಂಡೇಲ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರೇರಣಾ ಪ್ರಶಸ್ತಿ, ಗಡಿನಾಡ ಸಿರಿ ಪ್ರಶಸ್ತಿಗಳು ಮುಖ್ಯವಾದವುಗಳು.

ಜೊತೆಗೆ ಕನ್ನಡ ತುಳು ಭಾಷಾ ಕಾರ್ಯಕ್ರಮಗಳಿಗೆ ಸಾದಾ ಪ್ರೋತ್ಸಾಹ ನೀಡುವ ಮಹಾನೀಯರಾದ ರವಿ ಶೆಟ್ಟಿ ಅವರು ಮೂರು ವರ್ಷಗಳ ಕಾಲ ತುಳು ಕೂಟ ಕತಾರಿನ ಅಧ್ಯಕ್ಷರಾಗಿ, ಬಂಟ್ಸ್ ಕತಾರ್ ಇದರ ಸ್ಥಾಪಕಾಧ್ಯಕ್ಷರಾಗಿ ಹಾಗೂ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ, ಪುತ್ತೂರು ತಾಲೂಕು ಮೂಂಡೂರು ಸುಬ್ರಾಯ ದೇವಸ್ಥಾನದ ಆಡಳಿತ ಮೋಕ್ತೆಸರರಾಗಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Pages