ಮುಂಬಯಿ : ಸ್ಥಳೀಯ ಬುಡಕಟ್ಟು ಪ್ರದೇಶದ ನಿವಾಸಿಗಳಿಗೆ ಉಪಯೋಗಿಸಲು ಬಂಟರ ಸಂಘ ಮುಂಬಯಿ, ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ ಇಲ್ಲಿನ ಸರಕಾರೇತರ ಸಂಘಟನೆಯ ಮೂಲಕ ಹಳೆಯ ಬಟ್ಟೆಗಳನ್ನು ಬಂಟರ ಸಂಘ, ಮುಂಬಯಿ, ವಸಾಯಿ-ದಹಾನು ಪ್ರಾದೇಶಿಕ ಸಮಿತಿಯ ವತಿಯಿಂದ 69ಕ್ಕೂ ಬ್ಯಾಗುಗಳಿಗೂ ಮಿಕ್ಕಿ ಉಪಯೋಗಿಸಿದ ಉಡುಪನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಂಟರ ಸಂಘ, ಮುಂಬಯಿ ಪಶ್ಚಿಮ ಪ್ರಾದೇಶಿಕ ಸಮಿತಿಗಳ ದಕ್ಷಿಣ ವಲಯದ ಸಮಾನಾರ್ಥ ಶಶಿಧರ ಶೆಟ್ಟಿ ಇನ್ನಂಜೆ, ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಜಗನ್ನಾಥ ಡಿ ಶೆಟ್ಟಿ ಪಲ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ, ಪ್ರಖ್ಯಾತ್ ಪಿ ಶೆಟ್ಟಿ, ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ, ಸುಪ್ರಿತ್ ಶೆಟ್ಟಿ, ಸಮಾಜ ಮತ್ತು ಶಿಕ್ಷಣ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಜಯ ಅಶೋಕ್ ಶೆಟ್ಟಿ, ಯುವ ಘಟಕದ ಕಾರ್ಯದರ್ಶಿ ಶ್ರದ್ಧಾ ಶೆಟ್ಟಿ, ಕೋಶಾಧಿಕಾರಿ ಸಚಿತ್ ಶೆಟ್ಟಿ, ಸದಸ್ಯರಾದ ವರ್ಷಾ ಶೆಟ್ಟಿ, ಆದರ್ಶ ಶೆಟ್ಟಿ ಮತ್ತು ರಿತಿನ್ ಶೆಟ್ಟಿ ಅವರು ಸುಮಾರು 69 ಬ್ಯಾಗ್ಗಳಿಗೂ ಮಿಕ್ಕಿ ಉಪಯೋಗಿಸಬಹುದಾದ ಉತ್ತಮ ಬಟ್ಟೆಗಳನ್ನು ಸ್ಥಳೀಯ ಸರಕಾರೇತರ ಸಂಘಟನೆಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.