BUNTS NEWS, ಮುಂಬಯಿ/ಬರೋಡಾ: ಗುಜರಾತಿನ ಬರೋಡಾದ ಶಶಿ ಕೇಟರಿಂಗ್ ಸರ್ವಿಸ್ನ ಮಾಲಿಕ,
ಗುಜರಾತ್ ತುಳು ಸಂಘ ಬರೋಡ
ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು
ಇದರ ಗುಜರಾತ್ ರಾಜ್ಯ ಘಟಕದ
ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಅವರು ಬರೋಡಾದ ಜಾಲಾವೃತ
ಪ್ರವಾಹ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ
ಆಹಾರಪೊಟ್ಟಣ, ನೀರಿನ ಬಾಟಲಿಗಳನ್ನು ನೀಡಿ
ಸಹಾಯ ಮಾಡಿದ್ದಾರೆ.
ಬರೋಡಾದ
ಹೆಸರಾಂತ ಪ್ರತಿಷ್ಠಿತ ಯುವೋದ್ಯಮಿ, ಕೊಡುಗೈದಾನಿ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ
ಗುರುವಾಯನಕೆರೆಯ ಶಶಿಧರ ಶೆಟ್ಟಿ ತನ್ನ ಮಿತ್ರವೃಂದ,
ಸಹದ್ಯೋಗಿ ಬಳಗವನ್ನೊಳಗೊಂಡ ಸೇವಾ ಸೈನಿಕರೊಂದಿಗೆ ರಾಷ್ಟ್ರೀಯ
ವಿಪತ್ತು ನಿರ್ವಹಣ ತಂಡ, ಸ್ಥಾನೀಯ
ಅಗ್ನಿಶಾಮಕ ದಳ, NDRF ಸಹಯೋಗದೊಂದಿಗೆ ವಿದ್ಯುಚ್ಛಕ್ತಿ
ಕಡಿತಗೊಂಡ ಸ್ಥಳಗಳಿಗೂ ವಿಶೇಷ ಬೆಳಕಿನ ಸಹಾಯ
ಪಡೆದು ಬೋಟುಗಳಲ್ಲಿ ಹಗಲಿರುಳು ಎನ್ನದೆ ಕೋಸ್ಟ್ಗಾರ್ಡ್ ದೋಣಿಗಳಲ್ಲಿ
ಮನೆಮನೆಗೆ ಸಾಗಿ ಸಹಾಯಸ್ತ ನೀಡಿದರು.
ಸಾವಿರಾರು
ನೌಕರರ ಧನಿಯಾಗಿರುವ ಶಶಿಧರ್ ಶೆಟ್ಟಿ ಸ್ವತಃ
ನೀರು ಬಾಟಲಿಗಳನ್ನು ಹೆಗಲನ್ನೇರಿಸಿ, ಇಲ್ಲಿನ ತುಳು-ಕನ್ನಡಿಗರನ್ನು
ಒಗ್ಗೂಡಿಸಿ ನಿರಾಶ್ರಿರಲ್ಲಿ ಧಾವಿಸಿದರು. ಬರೋಡಾ ಸಂಸದ ರಂಜನ್ಬೆನ್ ಧನಂಜಯ್ ಭಟ್,
ಸ್ಥಳೀಯ ಶಾಸಕರ, ರಿಫೈನರಿ, ಕೈಗಾರಿಕೋದ್ಯಮ,
ಕಂಪೆನಿಗಳ ಸಹಕಾರದಿಂದ ನೀರು, ಚಹಾ, ತಿಂಡಿತಿನಿಸು,
ಉಪಹಾರಗಳ ಸಾವಿರಾರು ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿ
ಸರಕು ವಾಹನಗಳಲ್ಲಿ ತುಂಬಿಸಿ ಮನೆಮನೆಗೆ ತಲುಪಿಸುವಲ್ಲಿ
ಕಾರ್ಯನಿರತರಾದರು. ಸೇವೆಯೊಂದಿಗೆ
ಮಾನವೀಯತೆಯನ್ನು ಮೆರೆದರು. ಮಧನ್ ಕುಮಾರ್ ಸೇರಿದಂತೆ
ಅನೇಕರು ಸಹಕರಿಸಿದರು.