‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಹೆಸರಿಡಲು ಹೈಕೋರ್ಟ್ ಸಮ್ಮತಿ: ನಾಮಕರಣಕ್ಕೆ ವಿಜಯಬ್ಯಾಂಕ್ ನೌಕರರ ಸಂಘದ ಒತ್ತಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಹೆಸರಿಡಲು ಹೈಕೋರ್ಟ್ ಸಮ್ಮತಿ: ನಾಮಕರಣಕ್ಕೆ ವಿಜಯಬ್ಯಾಂಕ್ ನೌಕರರ ಸಂಘದ ಒತ್ತಾಯ

Share This
BUNTS NEWS, ಮಂಗಳೂರು: ಲೈಟ್’ಹೌಸ್ ಹಿಲ್ ರಸ್ತೆಗೆ ಮೇ.24, 2017ರಂದು ಸರ್ಕಾರ ಆದೇಶಿಸಿದ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣದ ಆದೇಶವನ್ನು ಯಥಾಸ್ಥಿತಿ ಪಾಲಿಸುವಂತೆ ಫೆ.9ರಂದು ಹೈಕೋರ್ಟ್ ಆದೇಶಿಸಿದ್ದು ರಸ್ತೆ ನಾಮಕರಣ ಮಾಡುವಂತೆ ವಿಜಯಬ್ಯಾಂಕ್ ನೌಕರರ ಸಂಘ, ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಒತ್ತಾಯ ಮಾಡಿದೆ.
vijaya bank
ವಿಜಯಬ್ಯಾಂಕ್ ನೌಕರರ ಸಂಘದ ಸುದ್ದಿಗೋಷ್ಠಿಯಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಹನುಮಂತ್ ಕಾಮತ್ ಮಾತನಾಡಿ,  ಲೈಟ್’ಹಾಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವಂತೆ ಸರ್ಕಾರದ ಆದೇಶವಿದ್ದರೂ ನಂತರ ಬಂದ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್’ಗೆ ಮನವಿ ಸಲ್ಲಿಸಿದಾಗ ಹೈಕೋರ್ಟ್ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವಂತೆ ಆದೇಶ ನೀಡಿದೆ. ರಸ್ತೆ ನಾಮಕರಕ್ಕೆ ಈ ಹಿಂದೆ 5 ಗಂಟೆಯೊಳಗೆ ತಡೆಯಾಜ್ಞೆ ತಂದಿದ್ದ ಶಾಸಕ ಲೋಬೊರವರಿಗೆ ಹೈಕೋರ್ಟ್ ಆದೇಶವಿದ್ದರೂ 1 ಗಂಟೆಯೊಳಗೆ ನಾಮಕರಣ ಮಾಡಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಇದೀಗ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ತನ್ನ ಫಲಕಗಳಲ್ಲಿ ಸಂತ ಅಲೋಶಿಯಸ್ ರಸ್ತೆ ಎಂಬುದಾಗಿ ಹಾಕುತ್ತಿರುವುದು ಸರಿಯಲ್ಲ. ಚಾಲ್ತಿಯಲ್ಲಿ ಅಧಿಕೃತವಲ್ಲದ ಲೈಟ್’ಹೌಸ್ ಹಿಲ್ ರಸ್ತೆ ಹೆಸರು ಬಿಟ್ಟರೆ ಸಂತ ಅಲೋಶಿಯಸ್ ರಸ್ತೆ ಎಂಬುದಾಗಿ ಇರಲಿಲ್ಲ. ಈಗ ಅಧಿಕೃತವಾಗಿರೋದು ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಮಾತ್ರ. ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿರುವುದರಿಂದ ಅಲೋಶಿಯಸ್ ರಸ್ತೆ ಎಂಬುದಾಗಿ ಹಾಕುತ್ತಿರುವುದು ತಪ್ಪಾಗಿದ್ದು ಶಿಕ್ಷಣ ನೀಡುವ ಸಂಸ್ಥೆ ಈ ತರ ಮಾಡೋದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಜಯಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ, ಇಂಟರ್’ನ್ಯಾಶನಲ್ ಬಂಟ್ಸ್ ವೆಲ್ಫೆರ್ ಟ್ರಸಿನ ರಾಜ್ ಗೋಪಾಲ್ ರೈ, ದೇವಿಚರಣ್ ಶೆಟ್ಟಿ, ವಿಜಯಬ್ಯಾಂಕ್ ನೌಕರರ ಸಂಘದ ವಲಯ ಕಾರ್ಯದರ್ಶಿ ರಘುರಾಮ ಸುವರ್ಣ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿಗಳು ಉಪಸ್ಥಿತರಿದ್ದರು.

Pages