ಕಟೀಲು ಮೇಳದ ‘ಬಂಟ’ ಯಜಮಾನ ಕಲ್ಲಾಡಿ ಅವರನ್ನು ಬದಲಾಯಿಸುವಂತೆ ‘ಬಿರುವೆರ್ ಕುಡ್ಲ’ ಆಗ್ರಹ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ಮೇಳದ ‘ಬಂಟ’ ಯಜಮಾನ ಕಲ್ಲಾಡಿ ಅವರನ್ನು ಬದಲಾಯಿಸುವಂತೆ ‘ಬಿರುವೆರ್ ಕುಡ್ಲ’ ಆಗ್ರಹ

Share This
Bunts News, ಮಂಗಳೂರು: ಕಟೀಲು ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅವರನ್ನು ಬದಲಾಯಿಸಬೇಕು ಹಾಗೂ ಈಗಾಗಲೇ ಮೇಳಕ್ಕೆ ರಾಜೀನಾಮೆ ನೀಡಿದ ಕಲಾವಿದರನ್ನು ಮೇಳಕ್ಕೆ ಸೇರಿಸಬೇಕೆಂದು ಬಿರುವೆರ್ ಕುಡ್ಲದ ಮಾಧ್ಯಮ ವಕ್ತಾರ ನಿತೇಶ್ ಮಾರ್ನಾಡ್ ಆಗ್ರಹಿಸಿದ್ದಾರೆ.
ಕಟೀಲು ಮೇಳದ ‘ಬಂಟ’ ಯಜಮಾನ ಕಲ್ಲಾಡಿ ಅವರನ್ನು ಬದಲಾಯಿಸುವಂತೆ ‘ಬಿರುವೆರ್ ಕುಡ್ಲ’ ಆಗ್ರಹ
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಳಕ್ಕೆ ರಾಜೀನಾಮೆ ನೀಡಿದ ಕಲಾವಿದರು ತಮ್ಮ ತಪ್ಪನ್ನು ತಿದ್ದಿಕೊಂಡು ಕ್ಷಮಾಪಣಾ ಪತ್ರವನ್ನು ಮೇಳದ ಯಜಮಾನರಿಗೆ ನೀಡಿದ್ದರು. ಆದರೆ ಮೇಳದ ಯಜಮಾನರಿಂದ ಯಾವುದೇ ರೀತಿಯ ಸಮರ್ಪಕ ಉತ್ತರ ಬಂದಿಲ್ಲ. ಮೇಳದ ಬಗೆಗಿನ ಅಭಿಮಾನದಿಂದ ರಾಜೀನಾಮೆ ನೀಡಿದ ಕಲಾವಿದರಿಗೆ ಇತರ ಮೇಳದಲ್ಲಿ ಕಾರ್ಯನಿರ್ವಹಿಸಲು ಮನಸ್ಸಿಲ್ಲ. ಹಾಗಾಗಿ ಕಟೀಲು ಮೇಳದಲ್ಲೇ ಮುಂದುವರೆಯಲು ಬಯಸಿದ್ದಾರೆ ಎಂದಿದ್ದಾರೆ.

ಮೇಳಕ್ಕೆ ರಾಜೀನಾಮೆ ನೀಡಿರುವ ಕಲಾವಿದರಲ್ಲಿ ಒರ್ವರಾದ ಮಾಧವ ಬಂಗೇರ ಮಾತನಾಡಿ, ನಾವು ಹಗಲಿರುಲ್ಲೆನ್ನದೆ ಮೇಳಕ್ಕಾಗಿ ದುಡಿದ್ದೇವೆ. ಮೇಳದಲ್ಲಿ ಯಜಮಾನರ ಆಡಳಿತ ಪಾರದರ್ಶಕವಾಗಿಲ್ಲ. ನಮಗೆ ಮೇಳ ದೇವಳದ ಬಗ್ಗೆ ಅಪಾರ ಗೌರವವಿದ್ದು ಮೇಳದ ಯಜಮಾನರ ವಿರುದ್ದ ನಮ್ಮ ಹೋರಾಟ ಎಂದು ಹೇಳಿದ್ದಾರೆ.

ಮೇಳದ ವಿಷಯದಲ್ಲಿ ಜಾತಿ ಸಂಘಟನೆ ಸುದ್ದಿಗೋಷ್ಠಿ ನಡೆಸಿರುವ ಹಿನ್ನೆಲೆ ಯಾವುದಾರೂ ಜಾತಿಗೆ ಮೇಳದಿಂದ ತೊಂದರೆಯಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿದ ಕಲಾವಿದ ಮಾಧವ ಬಂಗೇರ, ಬಿಲ್ಲವ ಕಲಾವಿದರನ್ನು ಕಡೆಗಣಿಸಲಾಗಿದೆ ಎಂದಾಗ ಬಿರುವೇರ್ ಕುಡ್ಲದ ನಿತೇಶ್ ಮಾತನಾಡಿ ಹಾಗೇನಿಲ್ಲ ಎಲ್ಲ ಜಾತಿಯ ಪರವಾಗಿ ನಾವಿದ್ದೇವೆ ಎಂದಿದ್ದಾರೆ.

Pages