ಬಂಟರ ಮಾತೃಸಂಘದಿಂದ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿಯೊಂದಿಗೆ ಸನ್ಮಾನ, ಅರ್ಜಿ ಆಹ್ವಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಮಾತೃಸಂಘದಿಂದ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿಯೊಂದಿಗೆ ಸನ್ಮಾನ, ಅರ್ಜಿ ಆಹ್ವಾನ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ 98ನೇ ಸರ್ವ ಸದಸ್ಯರ ಸಭೆ ಹಾಗೂ ಬಹಿರಂಗ ಅಧಿವೇಶನವು ಶೀಘ್ರದಲ್ಲಿ ಜರಗಲಿದ್ದು, ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರನ್ನು ಗುರುತಿಸಿ ಚಿನ್ನದ ಪದಕ, ಪ್ರಶಸ್ತಿಗಳೊಂದಿಗೆ ಸನ್ಮಾನಿಸಲಾಗುತ್ತಿದೆ.
ಉತ್ತಮ ಸಮಾಜ ಸೇವೆ, ವೈದ್ಯಕೀಯ ಕ್ಷೇತ್ರಉತ್ತಮ ಕೃಷಿಕ, ಉತ್ತಮ ತೋಟಗಾರಿಕೆಹೊಟೇಲ್ ಉದ್ಯಮದಲ್ಲಿದ್ದು  ಉತ್ತಮ  ಸಮಾಜ ಸೇವೆ, ಉತ್ತಮ ಕೈಗಾರಿಕೋದ್ಯಮಿ, ಉತ್ತಮ ಕ್ರೀಡಾಪಟು, ಉತ್ತಮ ಸಮಾಜ ಸೇವೆಕಲಾಕ್ಷೇತ್ರ, ಉತ್ತಮ ಶಿಕ್ಷಕಧಾರ್ಮಿಕ, ಸಮಾಜ ಕಲ್ಯಾಣ, ಸಾಂಸ್ಕøತಿಕ, ಶೌರ್ಯ, ಸಂಶೋಧನೆ, ದೇಶಸೇವೆ   ಹಾಗೂ ಇತರ ಯಾವುದೇ ಕ್ಷೇತ್ರದಲ್ಲಿ ವಿಶೇಷ  ಸಾಧನೆ, ಸೇವೆ ಕ್ಷೇತ್ರಗಳಲ್ಲಿ ಅತ್ಯುತ್ತಮ  ಸೇವೆಗೈದವರಿಗೆ ಚಿನ್ನದ ಪದಕ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುವುದು.

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರ ಮಾಹಿತಿ, ಪರಿಚಯವನ್ನು ಅವರ ಸಂಪೂರ್ಣ ವಿವರಗಳನ್ನು  ಕಾರ್ಯಕಾರಿ ಸಮಿತಿ ಸದಸ್ಯರ ಶಿಫಾರಸ್ಸಿನೊಂದಿಗೆ 7 ದಿವಸದೊಳಗೆ ಮಾತೃಸಂಘಕ್ಕೆ ಕಳುಹಿಸಿಕೊಡಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ವಸಂತ ಶೆಟ್ಟಿ ತಿಳಿಸಿದ್ದಾರೆ.

Pages