ಮಂಗಳೂರು : ರಾಜ್ಯ ಮಟ್ಟದ 71ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ತಲಪಾಡಿಯ ಶ್ರಾವ್ಯ ವಿ. ಶೆಟ್ಟಿ ಇವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸನ್ಮಾನಿಸಿ ಗೌರವಿಸಿತು.
![](https://blogger.googleusercontent.com/img/b/R29vZ2xl/AVvXsEgQNHU4H_6R5212F9ERANigFitF0jZ5X5ZXyTmxKNcj2nDPM4cvsYJYoWUuSz3w1Nr3UUoWU2ZPIplUU0b6FgrCD_CiGgLNAotAhZbtSfHuqKLinpIPwcV0dlrqrp11e_zYCU_Duv0b-gfk/s16000/IMG_20211123_135640.jpg)
![](https://blogger.googleusercontent.com/img/b/R29vZ2xl/AVvXsEjFPpYTLqfcAj-yM_E1d16FjI-LXqTEBm5z7AHQopEV0dQiMithtzpFFdKwpYrSu3837lUOvp8oPOC427gezraa7Syz9ynwiD502I0FCEZNb7TVdk8VpdfAxxLOzm4_F66I1GoWpeJ9bvuf/s16000/IMG_20211123_135640.jpg)
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಶ್ರಾವ್ಯ ಶೆಟ್ಟಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ಮಲ್ಲ ದಿನ ಪತ್ರಿಕೆಯ ಸಂಪಾದಕರಾದಂತಹ ಚಂದ್ರಶೇಖರ ಪಾಲೆತ್ತಡಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲು, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಸುಧಾಕರ್ ಪೂಂಜಾ, ಸಾಲೆತ್ತೂರ್ ಬಂಟರ ಸಂಘದ ಅಧ್ಯಕ್ಷರಾದ ದೇವಪ್ಪ ಶೇಖ, ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ತಲಪಾಡಿ, ಶ್ರಾವ್ಯಳ ತಾಯಿ ಶ್ರೀಮತಿ ಸುಶೀಲ ವಿ. ಶೆಟ್ಟಿ, ಮಾಧ್ಯಮ ಮಿತ್ರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.