BUNTS NEWS, ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಸಹಾಯಹಸ್ತ ವಿತರಣೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕುಸುಮೋದರ ಶೆಟ್ಟಿಯವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
![kusumodhara shetty kd shetty](https://blogger.googleusercontent.com/img/b/R29vZ2xl/AVvXsEgKuR2Z5_T8S4tlkcEbMBC54T7s5NdK8N_WHleVNJgEv0mCN8czICdKl7d376Gyr3DEoAwzY5Ajt4DeqrlI1OvdEVaD9RvphXPeSC-AkiUpj8iBp7J1pqpTagCEtdjJxzc_Oq9qL04_36hd/s16000/KD+Shetty.jpg)
![](https://blogger.googleusercontent.com/img/b/R29vZ2xl/AVvXsEgKuR2Z5_T8S4tlkcEbMBC54T7s5NdK8N_WHleVNJgEv0mCN8czICdKl7d376Gyr3DEoAwzY5Ajt4DeqrlI1OvdEVaD9RvphXPeSC-AkiUpj8iBp7J1pqpTagCEtdjJxzc_Oq9qL04_36hd/s16000/KD+Shetty.jpg)
ಸನ್ಮಾನವನ್ನು
ಸ್ವೀಕರಿಸಿ ಮಾತನಾಡಿದ ಕುಸುಮೋದರ ಶೆಟ್ಟಿ (ಕೆ. ಡಿ.
ಶೆಟ್ಟಿ) ಅವರು, ಪ್ರಶಸ್ತಿಯನ್ನು ನಾವು
ಹುಡುಕಿಕೊಂಡು ಹೋಗಬೇಕಾಗಿಲ್ಲ ಉತ್ತಮ ಕೆಲಸ ಮಾಡಿದಲ್ಲಿ
ಪ್ರಶಸ್ತಿಯು ನಮ್ಮನ್ನು ಅರಸಿಕೊಂಡು ಬರುತ್ತದೆ. ಕನ್ನಡಕ್ಕಾಗಿ ಕನ್ನಡದ ಮಕ್ಕಳಿಗಾಗಿ ನಾನು
ಶಕ್ತಿ ಮೀರಿ ಸಹಕರಿಸಿದ್ದೇನೆ. ದಾನ
ಧರ್ಮ ನನ್ನ ರಕ್ತದಲ್ಲೇ ಹರಡಿದೆ.
ಮಕ್ಕಳಿಗೆ ನೀಡುತ್ತಿರುವ ಈ ಸಹಾಯವು ಬಂಟ
ಸಮಾಜದ ಪ್ರಸಾದ. ಇದನ್ನು ಸ್ವೀಕರಿಸಿ
ಮುಂದಿ ನೀವು ಉತ್ತಮ ನಾಗರಿಗರಾಗಿ
ಮುಂದಿನ ಪೀಳಿಗೆಗೆ ಸಹಕರಿಸುವಂತಾಗಲಿ. ಇಂದಿನ ಕೊರೋನಾದ ಸಂದಿಗ್ಧ
ಪರಿಸ್ಥಿತಿಯಲ್ಲಿ ಐಕಳ ಹರೀಶ್ ಶೆಟ್ಟಿ
ಮತ್ತವರ ತಂಡದ ಕಾರ್ಯ ಪ್ರಶಂಸನೀಯ
ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಶ್ ಶೆಟ್ಟಿ, ಕೃಷ್ಣ ಶೆಟ್ಟಿ , ಜೊತೆ ಕಾರ್ಯದರ್ಶಿ ಸತೀಷ್ ಅಡಪ ಸಂಕಬೈಲ್, ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ಸರಿತಾ ಕುಸುಮೋದರ ಶೆಟ್ಟಿ, ಸುಧಾಕರ ಹೆಗ್ಡೆ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಬಂಟರ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ನೈಜೀರಿಯಾದ ಜಿ.ಐ.ಎ. ಇಂಟರ್ ಗ್ಲೋಬಲ್ ನ ಸಿ.ಎಂ. ಡಿ. ಅಜಿತ್ ಚೌಟ, ಓಮನ್ ಅಭೀರ್ ಗ್ರೂಫ್ ಆಪ್ ಕಂಪನೀಸ್ ನ ಸಿ.ಎಂ.ಡಿ. ಶಶಿಧರ್ ಶೆಟ್ಟಿ ಓಮನ್, ಶಕುಂತಳ ಸದಾನಂದ ಶೆಟ್ಟಿ , ರತ್ನ ಶೆಟ್ಟಿ ವೇದಿಕೆಯಲ್ಲಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.