ಬಂಟ್ಸ್ ನ್ಯೂಸ್, ಮಂಗಳೂರು: ಬಂಟರ ಯಾನೆ ನಾಡವರ
ಮಾತೃ ಸಂಘದ ಮಂಗಳೂರು ತಾಲೂಕು
ಸಮಿತಿಯಿಂದ ಕೊರೊನಾ ವೈರಸ್ನಿಂದ
ಲಾಕ್ ಡೌನ್ ಆಗಿ ತೊಂದರೆಗೊಳಗಾದ
ಮಂಗಳೂರು ತಾಲೂಕು ವ್ಯಾಪ್ತಿಯ ಬಂಟರ
ಸಮಾಜದ ಸಂತ್ರಸ್ತ ಕುಟುಂಬಗಳಿಗೆ ದಿನ ಬಳಕೆಯ ಆಹಾರ
ಕಿಟ್ಗಳನ್ನು ವಿತರಿಸಲಾಯಿತು.
ಬಂಟ್ಸ್
ಹಾಸ್ಟೆಲ್ನಲ್ಲಿರುವ ಬಂಟರ ಮಾತೃ ಸಂಘದ
ಮಂಗಳೂರು ತಾಲೂಕು ಸಮಿತಿಯ ಕಚೇರಿಯಲ್ಲಿ
ಮಂಗಳೂರು ತಾಲೂಕು ಸಮಿತಿಯ ವತಿಯಿಂದ
ಬಂಟರ ಯಾನೆ ನಾಡವ ಮಾತೃ
ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ
ಮಾಲಾಡಿ ಅವರ ಮಾರ್ಗದರ್ಶನದಂತೆ ಮಂಗಳೂರು
ತಾಲೂಕಿನ ಕಾರ್ಯಕಾರಿ ಸಮಿತಿ ಸದಸ್ಯರ ಮೂಲಕ
ಅಹಾರ ಕಿಟ್ಗಳನ್ನು ಆಯಾಯ
ವಲಯಗಳಿಗೆ ನೀಡಲಾಯಿತು.
ಕೊರೊನಾ
ವೈರಸ್ನಿಂದ ಲಾಕ್ಡೌನ್
ಆದ ಹಿನ್ನೆಲೆಯಲ್ಲಿ ಜನರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ಗಳನ್ನು
ವಿತರಿಸಲಾಗಿದೆ ಎಂದು ಮಂಗಳೂರು ತಾಲೂಕು ಸಮಿತಿಯ
ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ
ಪೆರ್ಮುದೆ ತಿಳಿಸಿದರು.
ಆಹಾರ ಕಿಟ್ ವಿತರಣೆಯ ಸಂದರ್ಭದಲ್ಲಿ
ಬಂಟರ ಮಾತೃ ಸಂಘದ ಪ್ರಧಾನ
ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರ ಕೃಷ್ಣಪ್ರಸಾದ್
ರೈ, ತಾಲೂಕು ಸಮಿತಿಯ ಸಹ
ಸಂಚಾಲಕ ಮುರಳೀಧರ ಶೆಟ್ಟಿ ಎಡಪದವು,
ಮಂಗಳೂರು ತಾಲೂಕು ಬಂಟರ ಸಂಘದ
ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಮಾಜಿ
ಕಾರ್ಯದರ್ಶಿ ವಸಂತ ಶೆಟ್ಟಿ, ಕಾರ್ಯಕಾರಿ
ಸಮಿತಿ ಸದಸ್ಯರಾದ ಜಯರಾಮ ಸಾಂತ, ಉಮೇಶ್
ರೈ ಪದವು ಮೇಗಿನ ಮನೆ,
ಜಗನ್ನಾಥ ಶೆಟ್ಟಿ ಬಾಳ, ಕೇಶವ
ಮಾರ್ಲ, ಎಂ. ಸುಂದರ ಶೆಟ್ಟಿ
ಸಬಿತಾ ಶೆಟ್ಟಿ, ಡಾ. ಸಚ್ಚಿದಾನಂದ
ಶೆಟ್ಟಿ ಮಣೀಶ್ ರೈ, ವಿಕಾಸ್
ಶೆಟ್ಟಿ ಮುಲ್ಕಿ, ಸಿ.ಎ.
ಶಾಂತರಾಮ ಶೆಟ್ಟಿ, ಜಯಶೀಲ ಅಡ್ಯಂತಾಯ,
ನಿವೇದಿತಾ ಎನ್. ಶೆಟ್ಟಿ. ಹರೀಶ್
ಶೆಟ್ಟಿ ಬಜಪೆ, ಉಮೇಶ್ ಶೆಟ್ಟಿ
ಮೂಡು ಶೆಡ್ಡೆ, ಸಂತೋಷ್ ಶೆಟ್ಟಿ
ಮೂಡು ಶೆಡ್ಡೆ, ರವೀಂದ್ರ ಶೆಟ್ಟಿ
ಶಕ್ತಿನಗರ, ಕಮಲಾಕ್ಷ ಶೆಟ್ಟಿ ಆಕಾಶ
ಭವನ ಸೋಹನ್ ಆಳ್ವ ನೀರು
ಮಾರ್ಗ, ಮೊದಲಾದವರು ಉಪಸ್ಥಿತರಿದ್ದರು. ಉಲ್ಲಾಸ್ ಶೆಟ್ಟಿ ಪೆರ್ಮುದೆ
ಕಾರ್ಯಕ್ರಮ ನಿರ್ವಹಿಸಿದರು.