ಪಲಿಮಾರು ಬಾಗಿ ಪೂಜಾರಿ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯಹಸ್ತ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಲಿಮಾರು ಬಾಗಿ ಪೂಜಾರಿ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯಹಸ್ತ

Share This
ಬಂಟ್ಸ್ ನ್ಯೂಸ್, ಉಡುಪಿ: ಪಲಿಮಾರು ಗ್ರಾಮದ ನಿವಾಸಿ ಬಿಲ್ಲವ ಸಮಾಜದ ಶ್ರೀಮತಿ ಬಾಗಿ ಪೂಜಾರಿ ಅವರ ಮನೆ ನಿರ್ಮಾಣ ಕಾರ್ಯಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ನ ಜಂಟಿಯಾಗಿ ಸಹಾಯಹಸ್ತವನ್ನು ನೀಡಿದ್ದಾರೆ.
ಪಲಿಮಾರು ಗ್ರಾಮದ ಸುತ್ತಮುತ್ತ ಸುಮಾರು ಐನೂರಕ್ಕೂ ವಿಕ್ಕಿ ಹೆರಿಗೆ ಮಾಡಿರುವ ಬಾಗಿ ಪೂಜಾರಿ ಅವರ ನಿವೇಶನವು ಶಿಥಿಲ ಕೊಂಡಿರುವುದನ್ನು ಗಮನಿಸಿ ಮನೆ ಮಾಡುವುದಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೇತೃತ್ವ ವಹಿಸಿರುವ ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮತ್ತು ಯುವ ಉದ್ಯಮಿ ಎನ್ .ಟಿ. ಪೂಜಾರಿ ಅವರ ನೇತೃತ್ವದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಬಾಗಿ ಪೂಜಾರಿಯವರ ಮನೆ ನಿರ್ಮಾಣಕ್ಕೆ ಸಹಾಯಹಸ್ತವನ್ನುನೀಡುವುದಕ್ಕೆ ಮುಂದಾಗಿದ್ದಾರೆ.

ಮನೆ ನಿರ್ಮಾಣದ ಕೆಲಸವನ್ನು ವೀಕ್ಷಿಸಲು ಹೋಗಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ನಿರ್ದೇಶಕ ಗಂಗಾಧರ್ ಎನ್ ಅಮೀನ್ ಕರ್ನಿರೆ ಬಾಗಿ ಪೂಜಾರಿಯವರ ಕುಟುಂಬದ ಸುಮನ ವಿಠ್ಠಲ್ ಪೂಜಾರಿಯವರಿಗೆ ಸಹಾಯಹಸ್ತವನ್ನು ಸಮರ್ಪಿಸಿದ್ದರು. ಸಂದರ್ಭ ಮುಖೇಶ್ ಅಮೀನ್ ಕರ್ನಿರೆ. ಜೈದೀಪ್ ಅಮೀನ್ ಕರ್ನಿರೆ ಮತ್ತಿತರರು ಉಪಸ್ಥಿತರಿದ್ದರು.

Pages