BUNTS NEWS, ದುಬೈ: ನಗರದ ಆಲ್ ಕುಝ್
ನ ಕ್ರೆಡೀಯನ್ಸ್ ಹೈಸ್ಕೂಲ್
ನ ಸಭಾಂಗಣದಲ್ಲಿ ಡಿ.20ರಂದು ಯುಎಇ ಬಂಟ್ಸ್
ಆಶ್ರಯದಲ್ಲಿ ಯುಎಇ ಬಂಟ್ಸ್ ಶ್ರೀ
ಸತ್ಯನಾರಾಯಣ ಪೂಜಾ ಸಮಿತಿ ಅರಭ್
ಸಂಯುಕ್ತ ಸಂಸ್ಥಾನ ವತಿಯಿಂದ ಸರ್ವಜನಿಕ
ಶ್ರೀ ಸತ್ಯನಾರಾಯಣ ಪೂಜೆಯು ಯಶಸ್ವಿಯಾಗಿ ಜರಗಿತು.
ಬೆಳಗ್ಗೆ
8 ಗಂಟೆಗೆ ಸಂಕಲ್ಪ, ಕಲಶ ಪ್ರತಿಷ್ಥಾಪನೆ
ಮಾಡಿ ಪೂಜಾ ವಿಧಿ ವಿಧಾನ ಜರಗಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ಸತ್ಯನಾರಾಯಣ
ದೇವರ ಕಥಾಸಾರ, 12.30ಕ್ಕೆ ಮಹಾಪೂಜೆ, ಮಹಾ
ಮಂಗಳಾರತಿ ಬಳಿಕ ಮಹಾ ಅನ್ನಸಂತರ್ಪಣೆ
ಜರಗಿತು.
ಕಾರ್ಯಕ್ರಮದಲ್ಲಿ ವಿಶೇಷ
ಆಕರ್ಷಣಿಯವಾದುದ್ದು ಶ್ರೀ ವರಲಕ್ಷ್ಮೀ ಪೂಜಾ
ಸಮಿತಿ ಯುಎಇ ತಂಡದವರಿಂದ ಕುಣಿತ
ಭಜನೆ ವಿಶೇಷ ಮೇರುಗು ತಂದಿತು. ಅವರೊಂದಿಗೆ
ಪೂಜಾ ಸಮಿತಿಯ ಸದಸ್ಯ, ಸದಸ್ಯೆಯರು
ಕುಣಿತ ಭಜನೆಯಲ್ಲಿ ಹೆಜ್ಜೆ ಹಾಕಿದರು. ಶ್ರೀ
ರಾಜರಾಜೇಶ್ವರಿ ಭಜನಾ ಮಂಡಳಿ ಯುಎಇ
ತಂಡದವರಿಂದ ಭಜನಾ ಸಂಗೀತ ಕಾರ್ಯಕ್ರಮ
ಜರಗಿತು. ಯುಎಇ ಬಂಟ್ಸ್ ಅಧ್ಯಕ್ಷರಾದ ಸರ್ವೊತೋಮ ಶೆಟ್ಟಿಯವರು ಸ್ವಾಗತಿಸಿ ಧನ್ಯವಾದವಿತ್ತರು. (ವರದಿ: ವಿಜಯಕುಮಾರ್
ಶೆಟ್ಟಿ ಮಜಿಬೈಲ್ ದುಬೈ)