BUNTS NEWS, ಮಂಗಳೂರು: ಬ್ಯಾಂಕ್ ಆಫ್ ಬರೋಡಾ ಜೊತೆ
ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಎಲ್ಎಲ್ಸಿ
ಐವನ್ ಡಿಸೋಜಾ ಪುರಭವನದ ಮುಂಭಾಗ ನಡೆಸಿದ ಉಪವಾಸ
ಸತ್ಯಾಗ್ರಹಕ್ಕೆ ಸಾಮಾಜಕ ಜಾಲತಾಣದಲ್ಲಿ
ಭಾರೀ ಖಂಡನೆ ವ್ಯಕ್ತವಾಗಿದೆ.
ಮುಖ್ಯವಾಗಿ ಈ ಹಿಂದೆ
ಲೈಟ್ ಹೌಸ್ ಹಿಲ್ ರಸ್ತೆಗೆ ವಿಜಯ ಬ್ಯಾಂಕಿನ ರೂವಾರಿ ದಿ. ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು
ಮರು ನಾಮಕರಣ ಮಾಡುವ ಸಂದರ್ಭ ಐವನ್ ಡಿಸೋಜಾ ರಾಜಕೀಯ ಮಾಡಿ ರಸ್ತೆಗೆ ನಾಮಕರಣವಾಗದಂತೆ ಅಡ್ಡಗಾಲು ಹಾಕಿದ್ದಲ್ಲದೆ
ಇದೀಗ ವಿಜಯ ಬ್ಯಾಂಕ್ ಬರೋಡಾ ಬ್ಯಾಂಕ್ ಜತೆ ವಿಲೀನಗೊಂಡಾಗ ಮೊಸಳೆ ಕಣ್ಣೀರು ಹಾಕುತ್ತಿರುವುದು ಯಾಕೆಂದು
? ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನಿಸುತ್ತಿದ್ದಾರೆ.
ಹೀಗೆ ನಾನಾ ರೀತಿಯ
ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಐವನ್ ಅವರಿಗೆ ಕೇಳುತ್ತಿದ್ದು ಮುಂದಿನ ದಿನಗಳಲ್ಲಿ
ಐವನ್ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸವರೇ ಕಾದು ನೋಡಬೇಕಾಗಿದೆ.