ನೀರುಮಾರ್ಗದಲ್ಲಿ ಕ್ಲೋತ್ ಬ್ಯಾಂಕ್ ಕಾರ್ಯಕ್ರಮ: 20 ಮಕ್ಕಳಿಗೆ ಹೊಸ ಬಟ್ಟೆ ವಿತರಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನೀರುಮಾರ್ಗದಲ್ಲಿ ಕ್ಲೋತ್ ಬ್ಯಾಂಕ್ ಕಾರ್ಯಕ್ರಮ: 20 ಮಕ್ಕಳಿಗೆ ಹೊಸ ಬಟ್ಟೆ ವಿತರಣೆ

Share This
ಮಂಗಳೂರು: ಕ್ಲೋತ್ ಬ್ಯಾಂಕ್ ವತಿಯಿಂದ ನೀರುಮಾರ್ಗ ಕುಟ್ಟಿಕುಳದಲ್ಲಿ ಲಲಿತಾ ಶೆಟ್ಟಿಯವರ ಮನೆಯಂಗಳದಲ್ಲಿ ಸ್ವಸಹಾಯ  ಸಂಘದ ಸದಸ್ಯರ 20 ಮಕ್ಕಳಿಗೆ ಹೊಸ ಬಟ್ಟೆ ವಿತರಣೆ ಮಾಡಲಾಯಿತು.
ಸಂದರ್ಭದಲ್ಲಿ ಕ್ಲೋತ್  ಬ್ಯಾಂಕ್ ಅಧ್ಯಕ್ಷರಾದ ರೇಮಂಡ್  ಡಿಕೂನ ಮಾತನಾಡಿ, ಇದೊದು ಕೆರೆಯ ನೀರು ಕೆರೆಗೆ ಚೆಲ್ಲಿ  ಕಾರ್ಯಕ್ರಮವಾಗಿದ್ದು ದಾನಿಗಳು ನೀಡಿದ  ಬಟ್ಟೆಯನ್ನು ನಾವು  ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುವುದಷ್ಟೆ. ದಾನಿಗಳಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿದರೆ ಅದೇ ನಿಮ್ಮ ಆಶೀರ್ವಾದ ಎಂದರು.

ಸ್ವ ಸಹಾಯ ಸಂಘದ  ಕಾರ್ಯದರ್ಶಿಯಾದ ಲಲಿತಾ ಶೆಟ್ಟಿ ಕ್ಲೋತ್ ಬ್ಯಾಂಕ್  ಕಾರ್ಯಕ್ರಮವನ್ನು ಶ್ಲಾಘಿಸಿ  ಧನ್ಯವಾದ ನೀಡಿದರು. ಕಾರವಾರ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಸುಜಾತ ಶೆಟ್ಟಿ ಸ್ವಾಗತಿಸಿ ವಂದಿಸಿದರು.

Pages